Connect with us

LATEST NEWS

ಸೂಲಿಬೆಲೆ ತೇಜಸ್ವಿ ಮಾತ್ರ ಅಲ್ಲ ನನ್ನ ಕೊಲೆಗೂ ಸ್ಕೇಚ್ ಹಾಕಲಾಗಿತ್ತು – ಯು.ಟಿ ಖಾದರ್

ಸೂಲಿಬೆಲೆ ತೇಜಸ್ವಿ ಮಾತ್ರ ಅಲ್ಲ ನನ್ನ ಕೊಲೆಗೂ ಸ್ಕೇಚ್ ಹಾಕಲಾಗಿತ್ತು – ಯು.ಟಿ ಖಾದರ್

ಮಂಗಳೂರು ಜನವರಿ 17: SDPI ಕಾರ್ಯಕರ್ತರಿಂದ ಚಿಂತಕ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್ ಪ್ರಕರಣಕ್ಕೆ ಕುರಿತಂತೆ ಮಾಜಿ ಸಚಿವ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ನನ್ನ ಮೇಲೆ ಕೂಡಾ ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿಯನ್ನ ಪೊಲೀಸ್ ಇಲಾಖೆ ನೀಡಿತ್ತು, ಅಲ್ಲದೆ ನನಗೆ ಭಧ್ರತೆ ಕೊಡುವ ಬಗ್ಗೆ ಹೇಳಿದ್ದರು.

ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಕೂಡಾ ಬೆಂಬಲಿಸಲ್ಲ. ಕಾನೂನು ಎಲ್ಲರಿಗೂ ಒಂದೇ, ಪ್ರತಿಯೊಬ್ಬರ ಜೀವ ಮೌಲ್ಯಯುತ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಜನರು ಸಹ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಎಸ್ ಡಿ ಪಿ ಐ ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರ ಹೇಳಬೇಕು, ಪ್ರತಿಪಕ್ಷದಲ್ಲಿದ್ದಾಗ ಅವರೇ ನಿಷೇಧದ ಬಗ್ಗೆ ಮಾತಾಡುತ್ತಿದ್ದರು. ಈಗ ಅವರದ್ದೇ ಸರ್ಕಾರ ಇದೆ, ಬೇರೆಯವರ ಬಳಿ ಕೇಳುವುದಕ್ಕೆ ಏನಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *