Connect with us

    DAKSHINA KANNADA

    ಉಳ್ಳಾಲ: ಸಮುದ್ರ ತೀರದಲ್ಲಿ ಟ್ರಾಲ್‌ಬೋಟ್ ಅವಘಡ – 8 ಮೀನುಗಾರರ ರಕ್ಷಣೆ

    ಉಳ್ಳಾಲ, ಫೆಬ್ರವರಿ 03: ಸಮುದ್ರ ತೀರದಿಂದ ಸುಮಾರು 12.5 ನಾಟಿಕಲ್ ದೂರದಲ್ಲಿ ಟ್ರಾಲ್‌ಬೋಟ್‌ವೊಂದು ಅವಘಡಕ್ಕೀಡಾಗಿದ್ದು, ಭಾರೀ ನಷ್ಟ ಸಂಭವಿಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದ್ದು, ಬೋಟಿನಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಜ.31ರಂದು ಬಾಲಕೃಷ್ಣ ಎಂಬವರ ಮಾಲಕತ್ವದ ಜಲ-ಮಾತಾ ಬೋಟು ಮೀನುಗಾರಿಕೆಗೆ ತೆರಳುತ್ತಿದ್ದಾಗ ಹಡಗಿನ ಅವಶೇಷಗಳಿಗೆ ತಾಗಿ ಜಖಂಗೊಂಡಿದೆ ಎನ್ನಲಾಗಿದೆ.

    ಇನ್ನು ತಕ್ಷಣ ಹತ್ತಿರದಲ್ಲೇ ಇದ್ದ ಲಲಿತಾ ಸಾಗರ ಎಂಬ ಹೆಸರಿನ ಬೋಟಿನಲ್ಲಿದ್ದ ಮೀನುಗಾರರು ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ. ಈ ಕುರಿತು ಕರಾವಳಿ ಕಾವಲು ಪಡೆಯ ಠಾಣೆಗೆ ದೂರು ನೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply