Connect with us

MANGALORE

ಮೂರು ತಿಂಗಳಿನಿಂದ ಸಿಗದ ವೇತನ ಉಡುಪಿ ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಮುಷ್ಕರ

ಉಡುಪಿ ಜೂನ್ 9: ಉದ್ಯಮಿ ಬಿ ಆರ್ ಶೆಟ್ಟಿ ನಡೆಸುತ್ತಿರುವ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.


ಕಳೆದ ಮೂರು ತಿಂಗಳಿನಿಂದ ವೇತನ ನೀಡದ ಹಿನ್ನಲೆ ವೈದ್ಯರು, ನರ್ಸ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಈ ಹಿನ್ನಲೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಗರ್ಭೀಣಿಯರು ಮತ್ತು ರೋಗಿಗಳು ತೊಂದರೆಗೊಳಗಾದ ಘಟನೆ ನಡೆದಿದೆ.


ಆಸ್ಪತ್ರೆಯ 200ಕ್ಕೂ ಅಧಿಕ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಬೆಳಗಿನಿಂದ ಯಾವುದೇ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ರೋಗಿಗಳು ದೂರಿದ್ದಾರೆ.


ಸದ್ಯ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸಲು ಮುಷ್ಕರ ನಿರತ ಸಿಬ್ಬಂದಿಗಳು ಮುಂದಾಗಿದ್ದು, ಆಸ್ಪತ್ರೆಯ ಬಹುತೇಕ ವಿಭಾಗಗಳು ಬಂದ್ ಆಗಿದೆ. ಮೊದಲು ವೇತನ ನೀಡಿ ಅಮೇಲೆ ಕೆಲಸ ಮಾಡ್ತೀವಿ ಎಂದು ಮುಷ್ಕರ ನಿರತ ಸಿಬ್ಬಂದಿಗಳ ಆಗ್ರಹಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *