Connect with us

LATEST NEWS

ಉಡುಪಿ ಜಿಲ್ಲಾ‌ ನಾಟಕ ಕಲಾವಿದರ ಒಕ್ಕೂಟ ಉದ್ಘಾಟನೆ

ಉಡುಪಿ ಮಾರ್ಚ್ 20: ನಾಟಕ ಕಲಾವಿದರಿಗೆ ತೊಂದರೆಗಳಾದಾಗ ಸಮಸ್ಯೆಗಳಾದಾಗ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಸಮಾಜಪರ ಮತ್ತು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಕಲಾವಿದರು ತೊಡಗಿಕೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ‌ ನಾಟಕ ಕಲಾವಿದರ ಒಕ್ಕೂಟ ಪ್ರಾರಂಭಗೊಂಡಿದ್ದು, ಅದರ ಉದ್ಘಾಟನೆ ನಡೆದಿದೆ.


ಒಕ್ಕೂಟದ ಅಧ್ಯಕ್ಷ ಲೀಲಾಧರ ಶೆಟ್ಟಿ ,ರಂಗಕರ್ಮಿ ಕೆ ಕೆ ಸಾಲಿಯಾನ್ , ಗೋಪಿನಾಥ್ ಭಟ್ ಹಳೆಯಂಗಡಿ, ಸಿನಿಮಾ‌ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ , ಪ್ರಭಾಕರ ಕಲ್ಯಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ದೇಯಿಬೈದೆತಿ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಮಾತನಾಡಿ ಇದುವರೆಗೆ ಕಲಾವಿದರು ತಮ್ಮನ್ನು ಕೇಳುವವರಿಲ್ಲ ಅನ್ನುವ ಭಾವನೆ ತೊಡೆದು ನಮಗೂ ಒಂದು ಸಂಘಟನೆ ಇದೆ ಎಂಬುದನ್ನು ಎದೆತಟ್ಟಿ ಹೇಳುವಂತಾಗಿದೆ ಎಂದರು. ಮನಗಂಡು ಜಿಲ್ಲೆಯ ಹಲವು ನಾಟಕ ತಂಡಗಳ ಮುಖ್ಯಸ್ಥರು ಒಟ್ಟಾಗಿ ಒಕ್ಕೂಟ ರಚಿಸಿದ್ದಾರೆ.


ಈ ಸಂದರ್ಭದಲ್ಲಿ ಜಿಲ್ಲಾ‌ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹರಿಪ್ರಸಾದ್ ನಂದಳಿಕೆ, ಸುಜಿತ್ ನಿಟ್ಟೆ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರವಿರಾಜ್ ಎಚ್ ಪಿ, ಕೊಂಕಣಿ‌ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಿನೇಶ್ ಕಲ್ಲೊಟ್ಟೆ ಇವರನ್ನು ಸನ್ಮಾನಿಸಲಾಯಿತು. ಪ್ರಸನ್ನ ಶೆಟ್ಟಿ ಬೈಲೂರು ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷ ಪ್ರಸ್ತಾವನೆಯ ಮಾತುಗಳನ್ನಾಡಿ ಸ್ವಾಗತಿಸಿದರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *