Connect with us

LATEST NEWS

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ್ ವರ್ಗಾವಣೆ: ನೂತನ ಎಸ್ ಪಿ ಅಕ್ಷಯ್ ಮಚ್ಚೇಂದ್ರ

ಉಡುಪಿ, ಆಗಸ್ಟ್ 16: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಎನ್. ವಿಷ್ಣುವರ್ಧನ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರು ಇಂಟಲಿಜೆನ್ಸ್ ವಿಭಾಗದ ಎಸ್ ಪಿ ಆಗಿ ವರ್ಗಾವಣೆ ಮಾಡಿ ಸರಕಾರ ಆದೇಶ ನೀಡಿದೆ.

ವಿಷ್ಣುವರ್ಧನ್ ಅವರು ಬೆಂಗಳೂರು ಇಂಟಲಿಜೆನ್ಸ್ ವಿಭಾಗದ ಎಸ್ ಪಿ ಆಗಿ ನಿಯುಕ್ತಿಗೊಂಡಿದ್ದಾರೆ. 2015 ರಲ್ಲಿ IPS ಸೇವೆಗೆ ಸೇರಿದ ಅಕ್ಷಯ್ ಮಚೇಂದ್ರ ಅವರನ್ನು ಈ ಹಿಂದೆ 2020 ರಲ್ಲಿ ಉಡುಪಿ ಎಸ್ ಪಿ ಆಗಿ ಸರ್ಕಾರ ವರ್ಗಾವಣೆ ಮಾಡಿದ್ದರು.

ಒಂದೇ ದಿನದಲ್ಲಿ ಆದೇಶದಲ್ಲಿ ಬದಲಾವಣೆ ಮಾಡಿ ಎನ್. ವಿಷ್ಣುವರ್ಧನ್ ರನ್ನು ಅಂದಿನ ಸರಕಾರ ನೇಮಿಸಿತು. ಇದೀಗ ಮತ್ತೆ ಉಡುಪಿ ಎಸ್ ಪಿ ಆಗಿ ಅಧಿಕಾರ ವಹಿಸಲಿದ್ದಾರೆ ಅಕ್ಷಯ್ ಮಚೇಂದ್ರ.

ಎನ್ ವಿಷ್ಣುವರ್ಧನ್ ಅವರು ದಕ್ಷ ಅಧಿಕಾರಿಯಾಗಿದ್ದು ಕೃಷ್ಣ ನಗರಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತಂದು ಹೆಸರುವಾಸಿಯಾಗಿದ್ದರು.ಜೊತೆಗೆ ಹಲವಾರು ಹೈ ಪ್ರೊಫೈಲ್ ಪ್ರಕರಣಗಳನ್ನು ಭೇದಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *