JYOTHISHYA
ಶ್ರೀ ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

ಮೇಷ:

ಕಳಪೆ ಮಟ್ಟದ ವಸ್ತುಗಳನ್ನು ಖರೀದಿ ಮಾಡುವುದು ಬೇಡ. ಸುಮ್ಮನೆ ನಿಮ್ಮ ಹಣ ನಷ್ಟ ಆಗಬಹುದು ಎಚ್ಚರ. ಉತ್ತಮ ವ್ಯಕ್ತಿಗಳ ಸಮಗಮ ಆಗುವ ದಿನವಿದು. ನಿಮ್ಮಲ್ಲಿನ ಚೈತನ್ಯ ಹಾಗೂ ಹಸನ್ಮುಖಿ ಸ್ವಭಾವದಿಂದ ಎಲ್ಲರ ಮನವನ್ನು ಗೆಲ್ಲುವಿರಿ. ಪ್ರೀತಿಪಾತ್ರರಿಗೆ ಔತಣಕೂಟ ಏರ್ಪಡಿಸುವ ಸಾಧ್ಯತೆ ಇದೆ. ಪ್ರೇಮಿಗಳಲ್ಲಿ ತಿರಸ್ಕಾರದ ಮನೋಭಾವನೆ ಬೆಳೆಯಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಷಭ: ಆರ್ಥಿಕ ವ್ಯವಹಾರಗಳು ವಿಳಂಬವಾದರೂ ಸಹ ಕಾರ್ಯಸಾಧನೆಯಾಗಲಿದೆ. ಸ್ನೇಹಿತರು ಹಿರಿಯರ ಸಹಾಯದಿಂದ ನಿಮ್ಮ ವ್ಯಾಜ್ಯಗಳಲ್ಲಿ ರಾಜಿಯಾಗುವ ಸಂಭವ ಬರಲಿದೆ. ಇತರರನ್ನು ಸಂತೋಷ ಗೊಳಿಸುವ ನಿಮ್ಮ ಗುಣ ಉತ್ತಮವಾಗಿರಲಿದೆ. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ. ಕುಟುಂಬದ ದೈನಂದಿನ ಅಗತ್ಯಗಳನ್ನು ನೆರವೇರಿಸಲು ಸಿದ್ದರಾಗಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ:
ಇಂದು ಸಮಾರಂಭಗಳಿಗೆ ಅಥವಾ ಗೋಷ್ಠಿಗಳಿಗೆ ನೀವು ಪಾಲ್ಗೊಳ್ಳಲು ಸಿದ್ದರಾಗುವಿರಿ. ಮಧ್ಯಮ ಗತಿಯ ಆರ್ಥಿಕ ವ್ಯವಹಾರ ನಡೆಯಲಿದೆ. ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಈ ದಿನ ಒಂದು ಹಂತದಲ್ಲಿ ಪುನರಾರಂಭ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ:
ಇಬ್ಬರ ಜಗಳದಲ್ಲಿ ನೀವು ಮೂರನೇ ವ್ಯಕ್ತಿಯಾಗಿ ಪ್ರವೇಶಿಸ ಬೇಡಿ ತಟಸ್ಥವಾಗಿರುವುದು ಕ್ಷೇಮ. ಸ್ವಂತ ಉದ್ಯೋಗದ ಯೋಜನೆ ಸಕಾರಾತ್ಮಕ ಗೊಳ್ಳುವ ಸುಸಂದರ್ಭ ಒದಗಿಬಂದಿದೆ. ಮಕ್ಕಳೊಡನೆ ಚುಟುಕು ಪ್ರವಾಸ ಅಥವಾ ಪ್ರದರ್ಶನ ಕಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಈ ದಿನ ಕಂಡುಬರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:
ಮನೆಗೆ ನೆಂಟರಿಷ್ಟರ ಆಗಮನದಿಂದ ಸಂತಸ ಹೆಚ್ಚಾಗಲಿದೆ. ಈ ದಿನ ನಿಮ್ಮ ಶ್ರಮ ತುಂಬಾ ಹೆಚ್ಚಾಗಿ ಕಾಣಬಹುದು. ಹೆಚ್ಚಿನ ಓಡಾಟ ಅಲೆದಾಟದಿಂದ ದೈಹಿಕ ಆಯಾಸ ದಂತಹ ಸಮಸ್ಯೆಯಲ್ಲಿ ಸಿಲುಕುವಿರಿ. ಕೆಲವು ಯಶಸ್ಸುಗಳು ಇನ್ನೇನು ಹತ್ತಿರದಲ್ಲಿದ್ದ ಹಾಗೆ ಅವುಗಳು ಕಣ್ಮರೆಯಾಗುವ ಸಾಧ್ಯತೆಗಳು ಕಂಡು ಬರುತ್ತದೆ. ತೀವ್ರತರನಾದ ನಿರಾಶಾ ಭಾವನೆ ಕಾಡಬಹುದು ನೀವು ಆದಷ್ಟು ಸಕಾರಾತ್ಮಕವಾಗಿ ಚಿಂತಿಸಿ ನಿಮ್ಮ ಪರಿಶ್ರಮಕ್ಕೆ ಖಂಡಿತ ಬೆಲೆ ಸಿಗಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕನ್ಯಾ :
ಕುಲ ದೇವತಾರಾಧನೆ ಮಾಡುವುದು ಒಳಿತು. ಹೊಸತನದತ್ತ ನಿಮ್ಮ ಪ್ರಯಾಣ ಸಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ ಹಾಗೂ ಮಿತ್ರರು ನಿಮ್ಮ ಜೀವನದಲ್ಲಿ ಸೇರ್ಪಡೆಯಾಗಲಿದ್ದಾರೆ. ಉದ್ಯಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಧುನಿಕತೆ ಮತ್ತು ತಂತ್ರಜ್ಞಾನವನ್ನು ನೀವು ಪ್ರಸ್ತುತಪಡಿಸಲು ಬಯಸುವಿರಿ. ನಿಮ್ಮ ಕೆಲವು ನಿಲುವುಗಳನ್ನು ಮೇಲಾಧಿಕಾರಿಗಳು ಯಾವುದೇ ಬೆಲೆ ನೀಡದೆ ತಳ್ಳಿಹಾಕಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ತುಲಾ :
ತಡೆಹಿಡಿದಿರುವ ಆರ್ಥಿಕ ಮೂಲಗಳು ಇಂದು ನಿಮ್ಮ ಕೈ ಸೇರುವ ಸಾಧ್ಯತೆ ಕಾಣಬಹುದು. ಬಹು ಕಷ್ಟದ ಕೆಲಸಗಳಿಂದ ಈ ದಿನ ಬಿಡುಗಡೆಯಾಗುವ ಸಾಧ್ಯತೆ ಕಾಣಬಹುದು. ಮನಸಿಗೆ ಸಂತೋಷ ನೀಡುವ ವಾತಾವರಣ ಹಾಗೂ ಶುಭ ಸುದ್ದಿಗಳು ಕಂಡುಬರುತ್ತದೆ. ಸಹವರ್ತಿಗಳು ಮತ್ಸರದ ಭಾವನೆ ಹೊಂದಿರುವರು ಆದಷ್ಟು ಎಚ್ಚರಿಕೆ ಇರಲಿ. ಹಣಕಾಸಿನ ವಿಷಯದಲ್ಲಿ ಉತ್ತಮ ರೀತಿಯ ವ್ಯವಹಾರಗಳು ಈ ದಿನ ಕಂಡುಬರಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಶ್ಚಿಕ :
ಸಂಗಾತಿಯ ಕೋಪವನ್ನು ಶಮನ ಮಾಡುವ ಪ್ರಯತ್ನ ಮಾಡುವಿರಿ. ಈದಿನ ಹೊರಗಿನ ಆಹಾರ ಸೇವನೆಯಲ್ಲಿ ಆದಷ್ಟು ಜಾಗ್ರತೆ ವಹಿಸುವುದು ಅವಶ್ಯಕ. ಆರೋಗ್ಯವನ್ನು ಜತನದಿಂದ ಕಾಪಾಡಿ ಕೊಳ್ಳುವುದು ಉತ್ತಮ. ಪ್ರವಾಸ ಕ್ಷೇತ್ರಗಳಲ್ಲಿ ಜಾಗೃತೆಯಿಂದ ಇರತಕ್ಕದ್ದು. ಕುಟುಂಬದಲ್ಲಿ ಕೆಲವು ವಿವಾದಗಳು ಹೆಚ್ಚಾಗಿ ಕಾಣಬಹುದಾಗಿದೆ ಆದಷ್ಟು ತಾಳ್ಮೆವಹಿಸಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:
ಮನಸ್ಸು ಚಂಚಲತೆಯಿಂದ ವರ್ತಿಸಲಿದೆ. ಕೆಲಸದಲ್ಲಿ ವಿಳಂಬ ಹೆಚ್ಚಾಗಬಹುದು. ಕೆಲವು ವಿಚಾರಗಳು ಗೊಂದಲಮಯವಾಗಿ ಇರಲಿದ್ದು ಕೆಲಸಗಳು ಅಪೂರ್ಣ ವಾಗಬಹುದು. ಯೋಜನೆಗಳಲ್ಲಿ ಸರಿಯಾದ ಮಾಹಿತಿ ತಿಳಿಯದೆ ಸಂಕಷ್ಟ ಅನುಭವಿಸುವಿರಿ, ಆದಷ್ಟು ನೀವು ಈ ದಿನ ಮನಸ್ಸನ್ನು ಶಾಂತಗೊಳಿಸುವ ಧ್ಯಾನ ಮಾರ್ಗ ಅನುಸರಿಸುವುದು ಸೂಕ್ತ. ದೈವಿಕ ಹರಕೆಗಳನ್ನು ಈಡೇರಿಸುವ ಸಾಧ್ಯತೆಗಳು ಕಂಡು ಬರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಕರ:
ಆರ್ಥಿಕವಾಗಿ ಸಬಲರಾಗುವ ಸಂದರ್ಭಗಳು ಬರಲಿವೆ. ಕೊಟ್ಟಿರುವ ಸಾಲಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಸಂಗಾತಿ ನಿಮ್ಮ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುವವರು. ನಿಮ್ಮ ಯೋಜನೆಗೆ ಕುಟುಂಬದವರು ಉತ್ತಮ ಸಲಹೆಗಳನ್ನು ನೀಡಲಿದ್ದಾರೆ ಆದಷ್ಟು ಅನುಸರಿಸಿ. ಹೂಡಿಕೆಗಳ ಬಗ್ಗೆ ಎಚ್ಚರವಿರಲಿ. ಮನೆಗೆ ಸಂಬಂಧಪಟ್ಟ ಉಪಯುಕ್ತ ವಸ್ತುಗಳನ್ನು ಖರೀದಿ ಮಾಡುವಿರಿ ಆದಷ್ಟು ಉತ್ತಮ ವಿರುವುದನ್ನು ಆಯ್ದುಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕುಂಭ:
ಪ್ರಾರಂಭಿಸಿರುವ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ಈ ದಿನ ನಿಮ್ಮ ಕಾರ್ಯಗಳನ್ನು ಬಲುಬೇಗನೆ ಮಾಡುವ ವ್ಯವಸ್ಥೆಮಾಡುವಿರಿ. ದಾಂಪತ್ಯದ ಭಿನ್ನಾಭಿಪ್ರಾಯಗಳು ಸರಿಹೋಗಲಿದೆ. ಹೊಸ ಉದ್ಯಮಕ್ಕೆ ಹಣಕಾಸು ಹೆಚ್ಚಾಗಿ ಖರ್ಚಾಗಬಹುದು ಆದರೆ ಅದು ಮುಂದಿನ ದಿನಗಳಲ್ಲಿ ಲಾಭಾಂಶ ನೀಡಲಿದೆ. ಹಿರಿಯರ ಜವಾಬ್ದಾರಿಗಳು ಪೂರೈಸುವಲ್ಲಿ ನಿಮ್ಮ ಶ್ರಮ ಉತ್ತಮವಾಗಿ ಮೂಡಿ ಬರುತ್ತದೆ, ಇದು ಎಲ್ಲರಿಂದಲೂ ಪ್ರಶಂಸೆ ತರಿಸುತ್ತದೆ. ಆಧ್ಯಾತ್ಮದತ್ತ ನಿಮ್ಮ ಸವಾರಿ ನಡೆಯಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮೀನ:
ಪತ್ನಿಯ ಸೌಂದರ್ಯಕ್ಕೆ ಮಾರುಹೋಗುವಿರಿ, ಅವರ ಮಾತುಗಳು ನಿಮಗೆ ಮುದ ನೀಡಲಿದೆ, ಅವರ ಸಣ್ಣ ಬಯಕೆಗಳನ್ನು ಪೂರೈಸಲು ನೀವು ಬದ್ಧರಾಗುವಿರಿ. ವಿಹಾರ ಹಾಗೂ ಔತಣಕೂಟಕ್ಕೆ ಹೊರಗಡೆ ಹೋಗುವ ಪ್ರಮೇಯ ಬರಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262