Connect with us

DAKSHINA KANNADA

ವೆಟ್‌ವೆಲ್ ಗೆ ಅಪಾಯವಾಗದಂತೆ ಎಚ್ಚರಿಕೆ ವಹಿಸಲು ಡಾ. ಭರತ್ ಶೆಟ್ಟಿ ಸೂಚನೆ

ಮಂಗಳೂರು, ಜೂನ್ 28 : ತಿರುವೈಲು ವಾರ್ಡ್ನಲ್ಲಿ ನಿರ್ಮಿಸುತ್ತಿರುವ ವೆಟ್‌ವೆಲ್ ಪ್ರಾಜೆಕ್ಟ್ಗೆ ಕೆತ್ತಿಕಲ್ ಗುಡ್ದದ ಮಣ್ಣುಗಾರಿಕೆಯಿಂದ ಅಪಾಯ ಎದುರಾಗಿದ್ದು, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಚನೆ ನೀಡಿದ್ದಾರೆ.

ಕರ್ನಾಟಕ ಅರ್ಬನ್  ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಆ್ಯಂಡ್ ಫೈನಾನ್ಸ್ ಕಾರ್ಪೊರೇಶನ್(ಕೆಯುಐಡಿಎಫ್‌ಸಿ) ಮೂಲಕ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ತಿರುವೈಲು ವಾರ್ಡ್ನಲ್ಲಿ ನಿರ್ಮಿಸುತ್ತಿರುವ ವೆಟ್‌ವೆಲ್ ಪ್ರಾಜೆಕ್ಟ್ಗೆ ಕೆತ್ತಿಕಲ್ ಗುಡ್ದದ ಮಣ್ಣುಗಾರಿಕೆಯಿಂದ ಅಪಾಯ ಎದುರಾಗಿದ್ದು, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಜೂ. 26ರಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವೆಟ್ ವೆಲ್ ಗೆ ಅಪಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು.

ಶಾಸಕರೊಂದಿಗೆ ಕೆಯುಐಡಿಎಫ್‌ಸಿ ಕಾರ್ಯಕಾರಿ ಇಂಜಿನಿಯರ್ ಸುರೇಶ್, ಎಡಬ್ಲ್ಯೂ ವೆಂಕಟರಮಣ, ಕನ್ಸಲ್ಟೆಂಟ್ ಜಯಪ್ರಕಾಶ್, ಯೋಜನೆಯ ಗುತ್ತಿಗೆದಾರ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಸಂತೋಷ್ ಮತ್ತಿತರರು ಇದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *