Connect with us

    LATEST NEWS

    ಜುಲೈ 29 ರಿಂದ ಬೀದಿ ಬದಿ ಅನಧಿಕೃತ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ

    ಮಂಗಳೂರು ಜುಲೈ 25: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಬೀದಿ ಬದಿ ವ್ಯಾಪಾರಿಗಳ ಮೇಲೆ ಜುಲೈ 29 ರಿಂದ ಟೈಗರ್ ಕಾರ್ಯಾಚರಣೆ ನಡೆಸಲಾಗುವುದು ಎಂದು ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು. ತಮ್ಮ ಕಚೇರಿಯಲ್ಲಿ ಬುಧವಾರ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.


    ನಗರದಲ್ಲಿ ಬೀದಿ ಬದಿ ತಳ್ಳುಗಾಡಿಗಳನ್ನು ಇಟ್ಟುವ್ಯಾಪಾರ ನಡೆಸಲು ಮಾತ್ರ ಅವಕಾಶವಿದೆ. ಆದರೆ ಕೆಲವರು ಅನಧಿಕೃತವಾಗಿ ಒಂದೇ ಕಡೆ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇನ್ನು ಕೆಲವರು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅನೇಕ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ’ ಎಂದರು.

    ವಿಮಾನನಿಲ್ದಾಣ ರಸ್ತೆಯಲ್ಲಿ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ತೆರಳಿದ್ದ ಪಾಲಿಕೆಯ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲಿಸುವುದಾಗಿ ಕದ್ರಿ ಠಾಣೆಯ ಪೊಲೀಸರು ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳ ಸ್ಥೈರ್ಯ ಕುಗ್ಗಿಸುವ ಇಂತಹ ನಡೆ ಸರಿಯಲ್ಲ. ಪೊಲೀಸರು ಪಾಲಿಕೆಗೆ ಸಹಕಾರ ನೀಡಬೇಕು. ಪೊಲೀಸರ ನೆರವು ಪಡೆದೇ ಟೈಗರ್ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದೇನೆ’ ಎಂದರು.
    ಬೀದಿಬದಿ ವ್ಯಾಪಾರ ನಡೆಸಲೆಂದೇ ನಗರದಲ್ಲಿ ಲೇಡಿಗೋಷನ್, ಕಂಕನಾಡಿ, ಮಣ್ಣಗುಡ್ಡೆಗಳಲ್ಲಿ ಜಾಗ ಗುರುತಿಸಲಾಗಿದೆ. ಕೆಲವೆಡೆ ಇದಕ್ಕೆ ಸ್ಥಳೀಯರ ವಿರೋಧವಿದೆ. ಲೇಡಿಗೋಷನ್ ಬಳಿಯ ಬೀದಿ ಬದಿ ವ್ಯಾಪಾರ ವಲಯವನ್ನು ತಿಂಗಳ ಒಳಗೆ ಆರಂಭಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply