ಉಡುಪಿ, ಮೇ 14: ತೌಖ್ತಾ ಚಂಡಮಾರುತದಿಂದ ಮರವಂತೆಯಲ್ಲಿ ಭಾರಿ ಹಾನಿಯಾಗಿದ್ದು, ಮರವಂತೆಯ ಕಡಲ ತಡಿಯಲ್ಲಿ ಭಾರೀ ಕಡಲ್ಕೊರೆತ ಉಂಟಾಗಿದೆ.
ತೌಖ್ತಾ ಚಂಡಮಾರುತದಿಂದ ಉಂಟಾದ ಅಲೆಗಳ ಹೊಡೆತಕ್ಕೆ ಹಲವಾರು ತೆಂಗಿನ ಮರಗಳು ಸಮುದ್ರಪಾಲಾಗಿದ್ದು, ಸುಮಾರು 30 ಮೀಟರ್ನಷ್ಟು ಕಡಲ ಅಲೆಗಳು ಮುಂದೆ ಬಂರುತ್ತಿವೆ.
ಕಡಲಿನ ರೌದ್ರಾವತಾರ ಕಂಡು ತೀರ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಲೆಗಳ ತೀವ್ರತೆ ಹೀಗೆ ಮುಂದುವರೆಯುತ್ತಾ ಹೋದರೆ ತೀರದ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಖಚಿತ.
Video: