Connect with us

    KARNATAKA

    ಹೈಹಿಲ್ಡ್ ಚಪ್ಪಲಿ ತಂದ ಗಂಡಾಂತರ – ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೋಡಿ ಸಾವಿನ ಕಾರಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು

    ಮೈಸೂರು ನವೆಂಬರ್ 11: ಇತ್ತೀಚೆಗೆ ನವಜೋಡಿಯೊಂದು ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರತ್ಯಕ್ಷದರ್ಶಿಗಳು ಅವಘಡಕ್ಕೆ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.


    ನವಜೋಡಿಯ ದುರಂತ ಸಾವಿಗೆ ಹೀಲ್ಡ್ ಚಪ್ಪಲಿ ಹಾಗೂ ಭಾರದ ಡ್ರೆಸ್​ ಕಾರಣವೆಂದು ಪ್ರತ್ಯಕ್ಷದರ್ಶಿಗಳು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಹೀಲ್ಡ್ ಚಪ್ಪಲಿ ಹಾಗೂ ಭಾರವಾದ ಡ್ರೆಸ್ ಧರಿಸಿದ್ದರಿಂದ ಈ ಅವಘಡ ಸಂಭವಿಸಿದೆ.


    ನವಜೋಡಿಯಾದ ಚಂದ್ರು ಮತ್ತು ಶಶಿಕಲಾ ಪ್ರೀ ವೆಡ್ಡಿಂಗ್​ ಫೋಟೋಶೂಟ್​ಗಾಗಿ ಮೈಸೂರಿನಿಂದ ಮುಡುಕುತೊರೆಗೆ ಆಗಮಿಸಿದ್ದರು. ನದಿ ನೋಡಿದ ಜೋಡಿ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ನಿರ್ಧಾರ ಮಾಡಿದರು
    ತಮ್ಮ ನಿರ್ಧಾರದಂತೆ ನವಜೋಡಿ ತೆಪ್ಪ ಹತ್ತಿದರು.

    ಈ ವೇಳೆ ನಿಂತುಕೊಂಡೇ ಇದ್ದ ಶಶಿಕಲಾ, ಕುಳಿತುಕೊಳ್ಳುವಾಗ ಹೀಲ್ಡ್ ಚಪ್ಪಲಿ ಸ್ಲಿಪ್​ ಆಗಿದೆ. ಪರಿಣಾಮ ತೆಪ್ಪ ಏಕಾಏಕಿ ಮಗುಚಿದೆ. ಈಜುಬಾರದ ಕಾರಣ ಚಂದ್ರು ಮತ್ತು ಶಶಿಕಲಾ ಮೃತಪಟ್ಟಿದ್ದಾರೆ
    ಘಟನೆ ಸಂಬಂಧ ಫೋಟೋಗ್ರಾಫರ್ ಕೀರ್ತಿ, ನಾವಿಕ ಮೂಗಪ್ಪ ಮೇಲೂ ಪ್ರಕರಣ ದಾಖಲು ಮಾಡಲಾಗಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply