ದೆಹಲಿ ಫೆಬ್ರವರಿ 12: ದೆಹಲಿಯ ಪೀರಗಢಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಮೂವರ ಮೃತದೇಹಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ಬಾಬಾ ಒಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಫಿರೋಝಾಬಾದ್ ನಿವಾಸಿ ಕಮರುದ್ದೀನ್ ಅಲಿಯಾಸ್ ‘ಫಕೀರ್ ಬಾಬಾ’, ಪೂಜೆ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಹೆಸರಿನಲ್ಲಿ ಜನರಿಗೆ ವಿಷ ಬೆರೆಸಿದ ಲಡ್ಡುಗಳನ್ನು ತಿನ್ನಿಸುತ್ತಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಇದೇ ರೀತಿ ಕನಿಷ್ಠ ಐದು ಜನರನ್ನು ಕೊಲೆ ಮಾಡಿದ್ದಾನೆ ಎಂದು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ.
ಉತ್ತರ ಪ್ರದೇಶದ ಫಿರೋಜಾಬಾದ್ ನಿವಾಸಿ ಕಮ್ರುದ್ದೀನ್ ಅಲಿಯಾಸ್ “ಬಾಬಾ” ಎಂದು ಗುರುತಿಸಲಾದ ಆರೋಪಿ, ತಾಂತ್ರಿಕ ಆಚರಣೆಗಳು ಮತ್ತು ಆಧ್ಯಾತ್ಮಿಕ ಚಿಕಿತ್ಸೆ ನೀಡುವ ನೆಪದಲ್ಲಿ ವಿಷ ಬೆರೆಸಿದ ಲಡ್ಡುಗಳನ್ನು ತಯಾರಿಸಿ, ತನ್ನ ಭಕ್ತರಿಗೆ ಸೇವಿಸುವಂತೆ ಮನವೊಲಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪೀರಗಢಿ ಪ್ರಕರಣದಲ್ಲಿ, ರಣಧೀರ್ (76), ನರೇಶ್ ಸಿಂಗ್ (47) ಮತ್ತು ಲಕ್ಷ್ಮಿ ದೇವಿ (40) ಫ್ಲೈಓವರ್ನಲ್ಲಿ ಅವರ ಕಾರಿನೊಳಗೆ ಪತ್ತೆಯಾಗಿದ್ದಾರೆ. ಪೊಲೀಸ್ ತನಿಖೆಯಲ್ಲಿ ಕಮರುದ್ದೀನ್ ಮೂವರೊಂದಿಗೆ ಹೋಗಿದ್ದ ಮತ್ತು ಅವರಿಗೆ ವಿಷ ಬೆರೆಸಿದ ಸಿಹಿತಿಂಡಿಗಳನ್ನು ನೀಡಿದ್ದಾನೆ ಎಂದು ತಿಳಿದುಬಂದಿದೆ.
ಬಾಬಾ ವಿರುದ್ಧ ಉತ್ತರ ಕನ್ನಡ ಪ್ರದೇಶದ ಫಿರೋಜಾಬಾದ್ ಮತ್ತು ಧೋಲ್ಪುರ್ನಲ್ಲಿ ಸಹ ಇದೇ ರೀತಿ ಪ್ರಕರಣಗಳು ದಾಖಲಾಗಿವೆ. ಫಿರೋಜಬಾದ್ನಲ್ಲಿ ಫಕೀರ್ ಬಾಬಾ ನೀಡಿದ ವಿಷದ ಲಡ್ಡುಗಳನ್ನು ಸೇವಿಸಿದ ಬಳಿಕ ಇಬ್ಬರು ಸಾವನ್ನಪ್ಪಿದ್ದರು. ಧೋಲ್ಪುರ್ನಲ್ಲಿ ಕೂಡ ಇದೇ ರೀತಿಯ ಒಂದು ಪ್ರಕರಣ ದಾಖಲಾಗಿದೆ. 2025ರ ಮೇ ತಿಂಗಳಲ್ಲಿ ಈ ಬಗ್ಗೆ ರಾಮ್ ಲಖನ್ ಎಂಬವರು ದೂರು ನೀಡಿದ್ದರು. ಅವರ ಸಂಬಂಧಿಕರ ಮಗ ಫಕೀರ್ ಬಾಬಾನ ಪೂಜೆಯಲ್ಲಿ ಪಾಲ್ಗೊಂಡು ಅವರು ನೀಡಿದ್ದ ವಿಷದ ಲಡ್ಡು ತಿಂದು ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದರು. ಘಟನಾ ಸ್ಥಳದಲ್ಲಿ ಲಡ್ಡುಗಳು, ಪೂಜಾ ಸಾಮಗ್ರಿಗಳು ಹಾಗೂ ಕನ್ನಡಕಗಳು ಸಿಕ್ಕಿದ್ದವು.
ಸದ್ಯ ಈ ಎಲ್ಲಾ ಆರು ಪ್ರಕರಣಗಳ ತನಿಖೆ ನಡೆಯುತ್ತಿದ್ದು, ದೆಹಲಿ ಪೊಲೀಸರು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಪೊಲೀಸರ ಸಹಯೋಗದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಫಕೀರ್ ಬಾಬಾ ಸಂತ್ರಸ್ತರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುತ್ತಿದ್ದ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.