Connect with us

DAKSHINA KANNADA

ರೋಟರಿ ಕ್ಲಬ್ ಮಂಗಳೂರು ಸೀಸೈಡ್ ವತಿಯಿಂದ ‘ಗುರುವಂದನಾ’ ಶಿಕ್ಷಕರಿಗಾಗಿ ಪ್ರತಿಭಾ ಸ್ಪರ್ಧೆ

ಮಂಗಳೂರು :  ರೋಟರಿ ಕ್ಲಬ್ ಮಂಗಳೂರು ಸೀಸೈಡ್ ವತಿಯಿಂದ ‘ಗುರುವಂದನಾ’ ಶಿಕ್ಷಕರಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಸೆ. 1 ರಂದು ನಗರಲ್ಲಿ ಆಯೋಜಿಸಿತ್ತು.

ಮಂಗಳೂರಿನ ಬೋಳೂರುನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಜರುಗಿದ ಈ ಸ್ಪರ್ಧೆಯನ್ನು ಎಸ್.ಎಲ್.ಶೇಟ್ ಡೈಮಂಡ್ ಹೌಸ್, ಲೇಡಿಹಿಲ್, ಮಂಗಳೂರು ಇಲ್ಲಿನ  ರವೀಂದ್ರ ಶೇಟ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಉದ್ಘಾಟನಾ ಕಾಠ್ಯಕ್ರಮದಲ್ಲಿ ರೋಟರಿ ಜಿಲ್ಲೆ 3181ರ ವಲಯ 3ರ ಅಸಿಸ್ಟೆಂಟ್ ಗವರ್ನರ್ ರೋ.ಡಾ| ರಂಜನ್ ಆರ್.ಕೆ, ಕ್ಲಬಿನ ಸಲಹೆಗಾರರಾದ ರೊ. ಮಾಧವ ಸುವರ್ಣ ಅವರು ಉಪಸ್ಥಿತರಿದ್ದರು. ಸುಮಾರು 29 ಶಾಲಾ ಕಾಲೇಜಿನ 350ಕ್ಕೂ ಅಧಿಕ ಶಿಕ್ಷಕರು ಈ ಸ್ಪರ್ಧಾಕೂಟದಲ್ಲಿ ಭಾಗಿಯಾಗಿದ್ದರು. ಹಾಡುಗಾರಿಕೆ, ನೃತ್ಯ, ರಸಪ್ರಶ್ನೆ ಹಾಗೂ ಇತರ ಪ್ರತಿಭಾ ಸ್ಪರ್ಧೆಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ಡಿಸ್ಟ್ರಿಕ್ಟ್ ಗವರ್ನರ್ ರೊ.ವಿಕ್ರಮ್ ದತ್ತ ಇವರು ಮುಖ್ಯ ಅತಿಥಿಯಾಗಿ ರೊ. ರಾಜೇಂದ್ರ ಕಲ್ಬಾವಿ, ರೊ. ಯತೀಶ್ ಬೈಕಂಪಾಡಿ ಭಾಗವಹಿಸಿದ್ದರು, ‘ಅನಂತಮಿತ್ರ ಕಲ್ಬಾವಿ ಶಿಕ್ಷಕೋತ್ತಮ ಪ್ರಶಸ್ತಿ’ಯನ್ನು ನಿವೃತ ಅಧ್ಯಾಪಕರಾದ ಶ್ರೀಮತಿ ಭಾರತಿ ಎಂ. ಇವರಿಗೆ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಂಗಳೂರು ರೋಟರಿ ಸೀಸೈಡ್ ಅಧ್ಯಕ್ಷರಾದ ರೊ. ಹೀರಾಚಂದ್ ಕರ್ಕೇರ ಕಾರದರ್ಶಿಗಳಾದ ರೊ, ಅಶೋಕ್ ಎಂ.ಕೆ ವೃತ್ತಿ ಸೇವೆ ನಿರ್ದೇಶಕರಾದ ರೊ. ಕಿರಣ್ ಕುಮಾರ್ ಮತ್ತು ಶಿಕ್ಷಕರ ಪ್ರತಿಭಾ ಸ್ಪರ್ಧೆಯ ಸಂಚಾಲಕರಾದ ರೂ. ನೆಲ್ಸನ್ ಗೋವಿಯಸ್ ಹಾಗೂ ರೋಟರಿ ಸದಸ್ಯರು ಪಾಲ್ಗೊಂಡಿದ್ದರು. ರೊ. ಕದ್ರಿ ಮನೋಹರ ಇವರು ಕಾರ್ಯಕ್ರಮ ನಿರೂಪಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *