Connect with us

    DAKSHINA KANNADA

    ಮಂಗಳೂರು ಟೋಲ್ ವಿರೋಧಿ ಹೋರಾಟಗಾರರಿಗೆ ಸಮನ್ಸ್, ಹೋರಾಟಗಾರಿಂದ ಸಿದ್ದತಾ ಸಭೆ..!

    ಮಂಗಳೂರು : ಯಶಸ್ವಿ ಟೋಲ್ ತೆರವು ಹೋರಾಟದಲ್ಲಿ ಭಾಗಿಗಳಾದ 101 ಜನ ಹೋರಾಟಗಾರರಿಗೆ ಜಾಮೀನು ಕೊಡಿಸುವ, ಆಗಬೇಕಾದ ಸಿದ್ದತೆಗಳ ಕುರಿತು ಚರ್ಚಿಸಲು ಭಾನುವಾರ ಕರೆಯಲಾದ ಹೋರಾಟ ಸಮಿತಿ ಸಭೆ ಯಶಸ್ವಿಯಾಗಿ ನಡೆಯಿತು.

    ಮಾಜಿ ಸಚಿವ ಅಭಯ ಚಂದ್ರ ಜೈನ್, ಮಾಜಿ ಉಪಮೇಯರ್ ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ, ದಯಾನಂದ ಶೆಟ್ಟಿ ಪ್ರಮುಖರಾದ ದಿಲ್ ರಾಜ್ ಆಳ್ವ, ವಿ ಕುಕ್ಯಾನ್, ಬಿ ಶೇಖರ್, ವಸಂತ ಬೆರ್ನಾಡ್, ಮಂಜುಳಾ ನಾಯಕ್, ರಮೇಶ್ ಟಿ ಎನ್, ರಾಘವೇಂದ್ರ ರಾವ್, ಶೇಖರ ಹೆಜಮಾಡಿ, ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಸಾಹುಲ್ ಹಮೀದ್ ಬಜ್ಪೆ, ಮೂಸಬ್ಬ ಪಕ್ಷಿಕೆರೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು‌.

    ಆರೋಪಪಟ್ಟಿಯಲಲ್ಲಿ ಹೆಸರಿರುವ 30 ಕ್ಕೂ ಹೆಚ್ಚು ಹೋರಾಟಗಾರರು ನ್ಯಾಯವಾದಿ ಚರಣ್ ಶೆಟ್ಟಿ ಮಾರ್ಗದರ್ಶನದಲ್ಲಿ ವಕಾಲತ್ತು ಫಾರಂ ಸಹಿ ಹಾಕಿದರು. ಇನ್ನುಳಿದವರು ಮುಂದಿನ ಗುರುವಾರದೊಳಗಡೆ ಹೋರಾಟ ಸಮಿತಿಯ ಆಯಾಯ ಪ್ರದೇಶದ ಪ್ರಮುಖರ ಸಹಾಯ ಪಡೆದು ವಕಾಲತ್ತು ಫಾರಂ ಭರ್ತಿ ಮಾಡಬೇಕಾಗಿ ಸಭೆ ವಿನಂತಿಸಿದೆ. ಜುಲೈ 06, 2024 ರ ಶನಿವಾರದಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯಬೇಕಿದ್ದು. ಅಂದು ಎಲ್ಲರೂ ಬೆಳಿಗ್ಗೆ 9:45 ರ ಒಳಗಡೆ ನ್ಯಾಯಾಲಯದಲ್ಲಿ ಹಾಜರಿದ್ದು ಸಹಕರಿಸಲು ಕೋರಲಾಗಿದೆ‌. ಅನಿವಾರ್ಯ ಆದವರು ಅಂದು ಬಂದು ವಕಾಲತ್ತು ಅರ್ಜಿ ಗೆ ಸಹಿ ಹಾಕಲು ಅವಕಾಶವಿದೆ‌. ಅಂತವರು ಬೆಳಿಗ್ಗೆ 9:30 ರ ಒಳಗಡೆ ನ್ಯಾಯಾಲಯದ ಆವರಣದಲ್ಲಿ ಹಾಜರಿರಬೇಕು.  ಜುಲೈ 06 ರಂದು ಹೋರಾಟ ಸಮಿತಿಯ ಪ್ರಮುಖರು, ಸಹಭಾಗಿ ಸಂಘಟನೆಗಳ ಪದಾಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದು ಮೊಕದ್ದಮೆ ಎದುರಿಸುತ್ತಿರುವ ಹೋರಾಟಗಾರರ ಜೊತೆಗೆ ಸೌಹಾರ್ದತೆ ಪ್ರಕಟಿಸಬೇಕಾಗಿ ಮನವಿ ಮಾಡಲಾಯಿತು. ಜನಪರ ಹೋರಾಟ ಮುನ್ನಡೆಯಲಿದೆ, ಕೇಸು, ಕೋರ್ಟು, ಜೈಲುಗಳು ನ್ಯಾಯದ ಪರವಾದ ಹೋರಾಟವನ್ನು ತಡೆಯಲಾರದು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಎಚ್ಚರಿಕೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply