Connect with us

    DAKSHINA KANNADA

    ಸುಳ್ಯ: ಅಡಿಕೆ‌ಗೆ ಹಳದಿ ರೋಗ ಬಾಧೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೃಷಿಕ ಆತ್ಮಹತ್ಯೆ

    ಸುಳ್ಯ:  ಅಡಿಕೆ ಕೃಷಿಗೆ ಭಾಧಿಸಿರುವ ಹಳದಿ ರೋಗದಿಂದ ಕಂಗೆಟ್ಟ ಕೃಷಿಕರೊಬ್ಬರು ಆತ್ಮಹತ್ಯೆ ಗೆ ಶರಣಾದ ಘಟನೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ನಡೆದಿದೆ.

    ಸುಳ್ಯ ತಾಲೂಕು ಮಡಪ್ಪಾಡಿ ಬಲ್ಕಜೆಯ  ಕೃಷಿಕ ಸೀತಾರಾಮ ಗೌಡರು (55) ಆತ್ಮಹತ್ಯೆ ಗೆ ಶರಣಾದ ದುರ್ದೈವಿಯಾಗಿದ್ದಾರೆ . ಹಲವು ವರ್ಷಗಳಿಂದ  ಅಡಿಕೆ ತೋಟಕ್ಕೆ ಹಳದಿ ರೋಗ ಮತ್ತು  ಎಲೆ ಚುಕ್ಕಿ  ರೋಗ ತಗುಲಿದ್ದು ಕಷ್ಟದಿಂದ ಮಾಡಿದ್ದ ಅಡಿಕೆ ಬೆಳೆ ಇಲ್ಲದಂತಾಗಿತ್ತು.  ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮನನೊಂದು ಆತ್ಮಹತ್ಯೆ ಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.  ಬೆಳಗ್ಗೆ ಮನೆಯಲ್ಲಿ ವಿಷ ಸೇವಿದ್ದನ್ನ ಗಮನಿಸಿದ್ದ ಮನೆ ಮಂದಿ ಕೂಡಲೇ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದಾರೆ. ಸುಳ್ಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply