Connect with us

    DAKSHINA KANNADA

    ಸುಳ್ಯ: ಕೋಳಿ ಸಾರಿಗಾಗಿ ಅಪ್ಪ-ಮಗನ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯ!

    ಸುಳ್ಯ, ಎಪ್ರಿಲ್ 05: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಗ್ರದಲ್ಲಿ ಕೋಳಿ ಸಾರಿಗೆ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.

    ಮೃತ ವ್ಯಕ್ತಿಯನ್ನು ಶಿವರಾಮ (33) ಎಂದು ಗುರುತಿಸಲಾಗಿದೆ. ಗುತ್ತಿಗಾರಿನ ಮೊಗ್ರ ದಲ್ಲಿರುವ  ಶಿವರಾಮನ ಮನೆಯಲ್ಲಿ ನಿನ್ನೆ ರಾತ್ರಿ ಕೋಳಿ ಸಾರು ಮಾಡಲಾಗಿತ್ತು, ಆದರೆ ಕೆಲಸ ಮುಗಿಸಿ ಮನೆಗೆ ಬಂದ ಶಿವರಾಮನಿಗೆ ಕೋಳಿ ಸಾರು ಮುಗಿದ ವಿಚಾರ ತಿಳಿಯಿತು, ಇದೇ ವಿಚಾರವಾಗಿ ತಂದೆ ಶೀನ ಜೊತೆ ಶಿವರಾಮ ವಾಗ್ವಾದಕ್ಕೆ ಇಳಿದಿದ್ದ, ಕುಪಿತಗೊಂಡ ಶೀನ ಶಿವರಾಮನ ತಲೆಗೆ ಬಡಿಗೆಯಿಂದ ಬಲವಾಗಿ ಹೊಡೆದ ಪರಿಣಾಮ ಶಿವರಾಮ (33) ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

    ವೈರಲ್ ಆದ ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ…ನಕಲಿ ಪಟ್ಟಿಯಲ್ಲಿ ಮುತಾಲಿಕ್, ನಳಿನ್ ಕುಮಾರ್ ಕಟೀಲ್ ಕೂಡ ಅಭ್ಯರ್ಥಿ…!

    ಆರೋಪಿ ತಂದೆ ಶೀನನನ್ನು ಪೋಲೀಸರು ಬಂಧಿಸಿದ್ದಾರೆ,ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply