Connect with us

LATEST NEWS

ಮಹಡಿಯಿಂದ ಕ್ರಿಕೆಟ್ ಬಾಲ್ ತರಲು ಹೋಗಿ ಕೆಳಗೆ ಬಿದ್ದು ವಿಧ್ಯಾರ್ಥಿ ಸಾವು…!!

ಮಂಗಳೂರು ಮೇ 04; ಕ್ರಿಕೆಟ್ ಆಟದ ಸಂದರ್ಭ ಮಹಡಿ ಮೇಲೆ ಬಿದ್ಜಿದ್ದ ಬಾಲ್ ನ್ನು ತೆಗೆಯಲು ಹೋಗಿ ವಿಧ್ಯಾರ್ಥಿಯೊಬ್ಬ ಸಾವನಪ್ಪಿರುವ ಘಟನೆ ನಗರದ ಕೊಟ್ಟಾರ ಚೌಕಿಯಲ್ಲಿರುವ ಖಾಸಗಿ ಕಾಲೇಜ್ ನ ಹಾಸ್ಟೆಲ್ ನಲ್ಲಿ ನಡೆದಿದೆ.


ಮೃತ ಬಾಲಕನನ್ನು ಪ್ರಣವ್ ಮುಂಡಾಸ (18) ಎಂದು ಗುರುತಿಸಲಾಗಿದೆ. ಈತ ವಿಜಯಪುರ ಮೂಲದ ವಿದ್ಯಾರ್ಥಿ. ಈತ ಕಾಲೇಜಿನ ಹಾಸ್ಟೇಲ್ ನಲ್ಲಿ ಕ್ರಿಕೆಟ್ ಆಡುವ ವೇಳೆ 4 ನೇ ಮಹಡಿಯಲ್ಲಿ ಸಿಕ್ಕಿಕೊಂಡ ಚೆಂಡನ್ನು ತರಲು ಹೋದಾಗ ಆಯ ತಪ್ಪಿ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪ್ರಣವ್ ನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *