Connect with us

KARNATAKA

ಸ್ಟೇರಿಂಗ್ ರಾಡ್ ತುಂಡಾಗಿ ಡ್ರೈವರ್ ಕೈಯಲ್ಲಿ, ಸರ್ಕಾರಿ ಬಸ್ ಹಳ್ಳದಲ್ಲಿ..!

ಚಾಮರಾಜನಗರ:  ಸಲಿಸುತ್ತಿದ್ದ ಸರ್ಕಾರಿ ಬಸ್‌ನ  ಸ್ಟೇರಿಂಗ್ ರಾಡ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ಬಿದ್ದ ಘಟಮನೆ ಚಾಮರಾಜನಗರದ ಯರಿಯೂರು ರಸ್ತೆಯಲ್ಲಿ  ನಡೆದಿದೆ.

ದುರ್ಬಘಟನೆಯಿಂದ ಬಸ್ಸ್‌ನಲ್ಲಿದ್ದ 13ಕ್ಕೂ‌ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕುಂದಕೆರೆ ಗ್ರಾಮದ ಗೋವಿಂದರಾಜು, ರಂಗಯ್ಯ ಸುನಿತಾ, ರಂಗಯ್ಯ ಎಂಬ ನಾಲ್ಕು ಮಂದಿ ಸೊಂಟ, ಎದೆ ಭಾಗ ಹಾಗೂ ತೆಲೆಗೆ ಗಾಯಗಳಾದ ಹಿನ್ನೆಲೆ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಕುಮಾರ್, ಮಹದೇವಯ್ಯ, ವೆಂಕಟೇಶ್, ಪ್ರಭುಸ್ವಾಮಿ, ನಾಗಾರಾಜು, ದೊಡ್ಡಯ್ಯ, ನಂದಗೋಪಾಲ್, ಪ್ರಸನ್ನ ಕುಮಾರ್, ರಾಜೇಶ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಕುಂದಕೆರೆಯಿಂದ ಯರಿಯೂರು ಮಾರ್ಗವಾಗಿ ಗುಂಡ್ಲುಪೇಟೆಗೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನ ಸ್ಟೇರಿಂಗ್ ಎಂಡ್ ಏಕಾಏಕಿ ತುಂಡಾದ ಪರಿಣಾಮ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ  ಹಳ್ಳಕ್ಕೆ ನುಗ್ಗಿದೆ.   ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಠಾಣೆ ಪೊಲೀಸರು ದೌಡಾಯಿಸಿ  ಸ್ಥಳಿಯರ ಸಹಕಾರದಲ್ಲಿ ರಕ್ಷಣಾಕಾರ್ಯ ನಡೆಸಿ  ಬಸ್ ಅನ್ನು ಮೇಲೆತ್ತಿ ಠಾಣೆಗೆ ಕೊಂಡೊಯ್ದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *