Connect with us

    LATEST NEWS

    ಮೊಬೈಲ್ ಕೊಡಲಿಲ್ಲ ಎಂದು ಸಿಟ್ಟಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ

    ಮಂಗಳೂರು ಫೆಬ್ರವರಿ 21: ವಿಧ್ಯಾರ್ಥಿನಿಯೊಬ್ಬಳು ತಾಯಿ ಮೊಬೈಲ್ ಕೊಡಲಿಲ್ಲ ಎಂಬ ಸಿಟ್ಟಿಗೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರದಂದು ಮೂಡುಬಿದಿರೆಯ ವಾಲ್ಪಾಡಿ ಗ್ರಾಮದ ನಾಗದಡ್ಕದಲ್ಲಿ ನಡೆದಿದೆ.
    ಉಮೇಶ್ ಪೂಜಾರಿ ಎಂಬವರ ಪುತ್ರಿ ಯುತಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದಾಳೆ. ಈಕೆ ಅಳಿಯೂರು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

    ಯುತಿಯ ತಂದೆ ಭಾನುವಾರ ಕೂಲಿ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಸ್ವಲ್ಪ ಹೊತ್ತಿನ ನಂತರ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿಗೆ ಹೋಗಲು ಸಿದ್ಧರಾದರು. ಈ ವೇಳೆ ತಾಯಿಯೂ ಹಿರಿಯ ಮಗಳು ಯುತಿಯನ್ನೂ ತಮ್ಮೊಂದಿಗೆ ಬರುವಂತೆ ಕೇಳಿದಾಗ, ತನಗೆ ಬರೆಯಲು ಇದೆ. ನಾನು ಬರುವುದಿಲ್ಲ ಎಂದು ನಿರಾಕರಿಸಿದ್ದಳು. ಈ ವೇಳೆ ಯುತಿ ತಾಯಿ ಕೈಯಲ್ಲಿದ್ದ ಮೊಬೈಲ್ ತನಗೆ ಕೊಟ್ಟು ಹೋಗುವಂತೆ ಕೇಳಿದ್ದಳು. ಮೊಬೈಲ್ ಈಗ ಕೊಡುವುದಿಲ್ಲ. ಶಿರ್ತಾಡಿಯಿಂದ ಬಂದ ಮೇಲೆ ಮೊಬೈಲ್ ಕೊಡುತ್ತೇನೆ ಎಂದು ಯುವತಿಯ ತಾಯಿ ಹೇಳಿ ಹೊರಟುಹೋಗಿದ್ದಾರೆ.

    ಮದ್ಯಾಹ್ನ ವಾಪಾಸಾದಾಗ ಮಗಳು ಕಾಣದಿರುವುದನ್ನು ಕಂಡು ಹುಡುಕಾಟದ ನಂತರ ಸಂಜೆ 4 ಗಂಟೆಗೆ ಮನೆಯ ಬಾವಿಯಲ್ಲಿ ಯುತಿಯ ಮೃತದೇಹ ಪತ್ತೆಯಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply