Connect with us

LATEST NEWS

ಊಟ ಕೇಳಿದ 82 ವರ್ಷದ ತಾಯಿಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ ಮಗ…!!

ಉಡುಪಿ ಜೂನ್ 05: ಊಟ ಕೇಳಿದ 82 ವರ್ಷದ ತಾಯಿಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿ ಕ್ರೂರತ್ವ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.


ಕಾರ್ಕಳದ ಕಲ್ಯಾ ಗ್ರಾಮದ ಕೈಕಂಬ ಎಂಬಲ್ಲಿ 82 ವರ್ಷದ ಯಶೋಧ ಹಾಗೂ ಮಗ ದಾಮೋದರನೊಂದಿಗೆ ವಾಸವಾಗಿದ್ದರು. ತಾಯಿ ಹಸಿವಿನಿಂದ ಮಗನಲ್ಲಿ ಊಟ ಕೇಳುದ್ದು ಈ ವೇಳೆ ಕೋಪಗೊಂಡ ಮಗ ದಾಮೋದರ ಊಟ ನೀಡದೇ ಇರುವುದು ಮಾತ್ರವಲ್ಲದೇ ಎದ್ದು ನಿಲ್ಲಲು ಆಗದ ವೃದ್ದೆ ತಾಯಿಯನ್ನು ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾನೆ.


ಜೀವನ್ಮರಣದ ಹೋರಾಟದ ಮದ್ಯೆ ರಕ್ತ ಸೋರುವ ರೀತಿಯಲ್ಲಿ ಮನೆ ಮುಂದಿನ ಜಗುಲಿಯಲ್ಲಿ ಬಿದ್ದಿದ್ದ ವ್ರದ್ದೆಯನ್ನು ನೋಡಿದ ಸಮಾಜ ಸೇವಕಿ ರಮಿತ ಶೈಲೆಂದ್ರ ಅವರು, ವ್ರದ್ದೆಯ ಮಗನಿಗೆ ಬೈದು ಆತನ ನೆರವಿನಿಂದಲೇ ಆಸ್ಪತ್ರೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಯಶೋಧಾ ಅವರ ಗಂಡ 5 ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ವೃದ್ಧೆ ಮಗನ ಜೊತೆಗೆ ವಾಸವಾಗಿದ್ದರು. ಮಗ ಹಾಗೂ ಸೊಸೆ ನನ್ನನ್ನು ಸರಿಯಾಗಿ ನೋಡಿಕೊಳ್ಳತ್ತಿರಲಿಲ್ಲ, ಮರದ ತುಂಡಿನಿಂದ ಹೊಡೆದು ಗಾಯಗೊಳಿಸಿದ್ದಾರೆ ಅಂತ ವೃದ್ಧೆ ಯಶೋಧಾ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಗ ದಾಮೋದರನ ವಿರುದ್ಧ, ಹೆತ್ತ ತಾಯಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Share Information
Continue Reading
Advertisement
Click to comment

Leave a Reply

Your email address will not be published. Required fields are marked *