Connect with us

DAKSHINA KANNADA

ಕಾಂಗ್ರೇಸ್ ನ ಕೆಲವು ನಾಯಕರು ನನ್ನ ಮತ್ತು ಶಾಸಕರ ನಡುವೆ ಮೈಮನಸ್ಸು ಮೂಡಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ – ಗ್ರಾಮಪಂಚಾಯತ್ ಸದಸ್ಯ‌ ಪುರುಷೋತ್ತಮ‌ ಶೆಟ್ಟಿ ಬೂಡಿಯಾರು

ಪುತ್ತೂರು ಜೂನ್ 12: ಕಾಂಗ್ರೇಸ್ ನ ಕೆಲವು ನಾಯಕರು ನನ್ನ ಮತ್ತು ಶಾಸಕರ ನಡುವೆ ಮೈಮನಸ್ಸು ಮೂಡಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೇಸ್ ಮುಖಂಡ ಮತ್ತು ಆರ್ಯಾಪು ಗ್ರಾಮಪಂಚಾಯತ್ ಸದಸ್ಯ‌ ಪುರುಷೋತ್ತಮ‌ ಶೆಟ್ಟಿ ಬೂಡಿಯಾರು ಆರೋಪಿಸಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳಿಯ‌ ಪತ್ರಿಕೆಯೊಂದರಲ್ಲಿ ತನ್ನ ಮತ್ತು ಶಾಸಕರ ವಿರುದ್ಧ ಮನಸ್ತಾಪ ಮೂಡಿಸಲೆಂದೇ ಪತ್ರಿಕೆಯವರನ್ನು ಸೆಟ್ಟಿಂಗ್ ಮಾಡಿ ವರದಿಯನ್ನು ಪ್ರಕಟಿಸುತ್ತಿದ್ದಾರೆ. ಆರ್ಯಾಪು ಗ್ರಾಮಪಂಚಾಯತ್ ವ್ಯಾಪ್ತಿಯ ಪರ್ಪುಂಜ-ಪಂಜಳ ರಸ್ತೆಯ ಚರಂಡಿ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿತ್ತು. ಪಂಚಾಯತ್ ನಲ್ಲಿ ಈ ವಿಚಾರವಾಗಿ ಚರ್ಚೆ ನಡೆಸಲಾಗಿತ್ತು. ಆದರೆ ಪಂಚಾಯತ್ ನಿಂದ ಯಾವುದೇ ಕಾಮಗಾರಿ ನಡೆಸಲು ಆಡಳಿತ ಮುಂದಾಗಿರಲಿಲ್ಲ. ಈ ನಡುವೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪಂಚಾಯತ್ ಪಿಡಿಒ‌ಗೆ ಕರೆ ಮಾಡಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದ ಹಿನ್ನಲೆಯಲ್ಲಿ ಅಧಿಕಾರಿಗಳು ಕಳಪೆ ಕಾಮಗಾರಿ ನಡೆಸಿದ್ದರು. ಈ ವಿಚಾರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಸಭೆಯಲ್ಲಿ ಪಿಡಿಒ ಶಾಸಕರು ಕರೆ ಮಾಡಿದ ಕಾರಣಕ್ಕೆ ಕಾಮಗಾರಿ ನಡೆಸಲಾಗಿದೆ ಎಂದು ಉತ್ತರ ಹೇಳಿದ ಸಂದರ್ಭದಲ್ಲಿ ನಾನು ಹಾಗಾದರೆ ಪಂಚಾಯತ್ ನ ಎಲ್ಲಾ ಕೆಲಸಗಳನ್ನು ಅವರೇ ಮಾಡಲಿ ಎಂದಿದ್ದೆ.ಆದರೆ ಅವರೇ ಎನ್ನುವ ಪದವನ್ನು ಶಾಸಕರಿಗೆ ಬಳಸಿಲ್ಲ. ಕಾಮಗಾರಿ ನಡೆಸುವಂತೆ ಶಾಸಕರಿಗೆ ದೂರು ನೀಡಿದ ಕಾಂಗ್ರೆಸ್ ಮುಖಂಡರಾದ ಶಿವರಾಮ ಆಳ್ವ ಮತ್ತು ಸನತ್ ಕುಮಾರ್ ರೈ ಯವರನ್ನು ಉದ್ಧೇಶಿಸಿ ಈ ಹೇಳಿಕೆ ನೀಡಿದ್ದೆ. ಆದರೆ ಸ್ಥಳೀಯ ಪತ್ರಿಕೆ ಈ ಇಬ್ಬರ ಕುಮ್ಮಕ್ಕಿನಿಂದ ನನ್ನ ಹೇಳಿಕೆ ಶಾಸಕರ ವಿರುದ್ಧ ಎನ್ನುವ ರೀತಿ ಬಿಂಬಿಸುವಂತೆ ಪ್ರಕಟಿಸಲಾಗಿದೆ. ಇದರ ಹಿಂದೆ ಕೆಲವು ಕಾಂಗ್ರೆಸ್ ಮುಖಂಡರ ಕೈವಾಡವೂ ಇದೆ. ಸ್ಥಳೀಯ ಪಂಚಾಯತ್ ಸದಸ್ಯರಿರುವಾಗ ಸ್ಥಳೀಯ ಸಮಸ್ಯೆಯನ್ನು ಸದಸ್ಯನ ಗಮನಕ್ಕೆ ತರುವ ಬದಲು ಶಾಸಕರ ಗಮನಕ್ಕೆ ತಂದು ಅವರ ಘನತೆಯನ್ನು ಕುಗ್ಗಿಸುವ ಪ್ರಯತ್ನ ಇದಾಗಿದೆ‌ ಎಂದು ದೂರಿದ್ದಾರೆ. ಕೆಲವು ಕಾಂಗ್ರೆಸ್ ಮುಖಂಡರು ಕಳೆದ ಹಲವು ವರ್ಷಗಳಿಂದ ಇದೇ ರೀತಿಯ ಷಡ್ಯಂತ್ರವನ್ನು ನನ್ನ ವಿರುದ್ಧ ಮಾಡಿದ್ದು, ಪಕ್ಷದ ವಿರುದ್ಧ ಕಾರ್ಯಾಚರಿಸುವವರ ಮೇಲೆ ನಾನು ಯಾವತ್ತೂ ಮಾತನಾಡುತ್ತೇನೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *