ಕೇರಳ ಫೆಬ್ರವರಿ 09: ಫೆಬ್ರವರಿ 1 ರಂದು ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ತಿರುವಲ್ಲಾದಲ್ಲಿರುವ ಆಯುರ್ವೇದ ಸ್ಪಾಗೆ ನುಗ್ಗಿ ಸ್ಪಾದಲ್ಲಿದ್ದ ಮಹಿಳಾ ಸಿಬ್ಬಂದಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕುಟ್ಟಪುಳದ ಪಪ್ಪನವೇಲಿಲ್ನ ಸುಬಿನ್ ಅಲೆಕ್ಸಾಂಡರ್ ಚಾಕೊ (29) ಅಲಿಯಾಸ್ ಮರಣಂ ಸುಬಿನ್ ಮತ್ತು ತಿರುವಲ್ಲಾದ ಮುಪ್ಪಿರಿಯಿಲ್ನ ಬರ್ಲಿನ್ ದಾಸ್ (38) ಮತ್ತು ನಿರಾಣಂ ಮೂಲದ ವರುಣ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಸ್ಪಾಗೆ ನುಗ್ಗಿದ ಆರು ಜನರಿದ್ದ ತಂಡ, ಮಹಿಳಾ ಸಿಬ್ಬಂದಿಯನ್ನು ಬೆದರಿಸಿ, ₹50,000 ಸುಲಿಗೆ ಹಣ ನೀಡಲು ಕೇಳಿದೆ. ಈ ವೇಳೆ ನಿರಾಕರಿಸಿದ್ದಕ್ಕೆ ಮಹಿಳಾ ಸಿಬ್ಬಂದಿಯನ್ನು ಕೋಣೆಯೊಂದಕ್ಕೆ ಎಳೆದುಕೊಂಡು ಹೋಗಿ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳು ಹಲ್ಲೆಯ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡು, ಅಲ್ಲಿಂದ ಪರಾರಿಯಾಗಿದ್ದಾರೆ ಹಾಗೂ ಮತ್ತೊಬ್ಬ ಸಿಬ್ಬಂದಿಯಿಂದ ₹2,500 ಕಸಿದುಕೊಂಡಿದ್ದಾರೆ.
ಇದನ್ನೂ ಓದಿ – ದೆಹಲಿ – ಪ್ಲೈಓವರ್ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಮೂರು ಜನರ ಶವ ಪತ್ತೆ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಫೆಬ್ರವರಿ 7 ರ ಶನಿವಾರ, ಕೇರಳ ಪೊಲೀಸರು ಸಾಮೂಹಿಕ ಅತ್ಯಾಚಾರದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ಅನ್ನು ರಚಿಸಿದರು. ಈ SIT ಗೆ ತಿರುವಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ನೇತೃತ್ವ ವಹಿಸಲಿದ್ದಾರೆ. ಫೆಬ್ರವರಿ 6 ರಂದು, ಪೊಲೀಸರು ಮಾರನಂ ಸುಬಿನ್ ಎಂದೂ ಕರೆಯಲ್ಪಡುವ ಸುಬಿನ್ ಅಲೆಕ್ಸಾಂಡರ್ ಚಾಕೊ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು.
ವರದಿಗಳ ಪ್ರಕಾರ, ಸುಬಿನ್ ಅಲೆಕ್ಸಾಂಡರ್ ಇತರ ಐದು ಜನರೊಂದಿಗೆ ಸ್ಪಾಗೆ ಹಲವು ಬಾರಿ ಭೇಟಿ ನೀಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ, ಮಾಲೀಕರಿಗೆ ಬೆದರಿಕೆ ಹಾಕಿದ್ದರು. ಬೇಡಿಕೆ ನಿರಾಕರಿಸಿದಾಗ, ಗ್ಯಾಂಗ್ ಉದ್ಯೋಗಿಗಳನ್ನು ಬೆದರಿಸಲು ಪ್ರಾರಂಭಿಸಿತು ಎಂದು ಆರೋಪಿಸಲಾಗಿದೆ.