Connect with us

LATEST NEWS

ದೇಶಕ್ಕೆ ಅನ್ನ ಕೊಡುವ ರೈತರ ಜೊತೆ ಚರ್ಚೆಗೆ ಸಿದ್ಧ – ಶೋಭಾ ಕರಂದ್ಲಾಜೆ

ಉಡುಪಿ ಸೆಪ್ಟೆಂಬರ್ 25: ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರ ಕರೆಕೊಟ್ಟಿರುವ ಸೋಮವಾರ ಭಾರತ್ ಬಂದ್ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರೈತ ಹೋರಾಟಗಾರರ ಜೊತೆ 11 ಸುತ್ತಿನ ಮಾತುಕತೆ ಆಗಿದೆ, ಮತ್ತೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ.

ಕೇಂದ್ರ ಕೃಷಿ ಬಿಲ್ ನಿಂದ ಲಾಭ ಏನು ನಷ್ಟ ಏನು ಎಂದು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿ ಕೊಳ್ಳಿ ಚರ್ಚೆ ಆಗದೆ ಲಾಭ ನಷ್ಟದ ಬಗ್ಗೆ ಗೊತ್ತಾಗುವುದಿಲ್ಲ ಎಂದ ಅವರು, ಕೇಂದ್ರದ ಬಿಲ್ ಅನುಷ್ಠಾನ ಮಾಡಿದ ರಾಜ್ಯಗಳಿಗೆ ಅಲ್ಲಿನ ರೈತರಿಗೆ ಲಾಭ ಆಗಿದೆ. ರಾಜ್ಯದ ವರದಿಯನ್ನು ರೈತ ಹೋರಾಟಗಾರರು ತರಿಸಿಕೊಳ್ಳಬೇಕು, ರೈತರ ವಿಚಾರದಲ್ಲಿ ರಾಜಕೀಯ ಇಲ್ಲ ರೈತರ ವಿಚಾರದಲ್ಲಿ ಧರ್ಮ ಮತ್ತು ಪಕ್ಷಗಳು ಇಲ್ಲ, ದೇಶಕ್ಕೆ ಅನ್ನ ಕೊಡುವವರ ರೈತರ ಜೊತೆ ಚರ್ಚೆಗೆ ಸಿದ್ಧ. ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *