Connect with us

DAKSHINA KANNADA

ಶಿರಾಡಿ ಘಾಟ್ ನಲ್ಲಿ ಅಪಘಾತ – ಓರಿಸ್ಸಾ ಮೂಲದ ಇಬ್ಬರ ಸಾವು

ಉಪ್ಪಿನಂಗಡಿ ಡಿಸೆಂಬರ್ 07 : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‍ ಕೆಂಪು ಹೊಳೆ ಬಳಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಓರಿಸ್ಸಾ ಮೂಲಕ ಇಬ್ಬರು ಸಾವನಪ್ಪಿದ ಘಟನೆ ನಡೆದಿದೆ. ಮೃತರನ್ನು ಒರಿಸ್ಸಾ ಮೂಲದ ಅಮೂಲ್ಯ ಪೆರಿಡಾ (23) ಹಾಗೂ ಇನ್ನೋರ್ವ ಸಾಂತಿರ್ನಿಶ್ ಜೂಟಿ (27) ಎಂದು ಗುರುತಿಸಲಾಗಿದೆ.


ಬುಧವಾರ ನಸುಕಿನ ವೇಳೆ ಶಿರಾಡಿ ಘಾಟ್‍ನ ಗಡಿ ದೇವಸ್ಥಾನದ ಮೇಲ್ಭಾಗದಲ್ಲಿನ ಕೆಂಪುಹೊಳೆ ಬಳಿ ಈ ದುರ್ಘಟನೆ ಸಂಭವಿಸಿದೆ. ಹಾಸನದಿಂದ ಮಂಗಳೂರಿನತ್ತ ಸರಕು ಒಯ್ಯುತ್ತಿದ್ದ ಮಿನಿ ಲಾರಿಗೆ ಯಾವುದೋ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ಅವಘಡದಿಂದ ಸಂಪೂರ್ಣ ಜಖಂಗೊಂಡ ಮಿನಿ ಲಾರಿಯಲ್ಲಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅಪಘಾತದ ಬಳಿಕ ಢಿಕ್ಕಿ ಹೊಡೆದ ವಾಹನ ನಿಲ್ಲದೆ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಸಕಲೇಶಪುರದ ಗ್ರಾಮಾಂತರ ಪೋಲಿಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *