Connect with us

LATEST NEWS

ಶಬರಿಮಲೆಯಲ್ಲಿ ಹೃದಯಾಘಾತದಿಂದ ಸಾವನಪ್ಪಿದ ಉದ್ಯಾವರದ ಸುರೇಶ್ ಬಂಗೇರ

ಉಡುಪಿ ಜನವರಿ 16: ದೇಶದಲ್ಲಿ ಹೃದಯಾಘಾತಕ್ಕೆ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಉಡುಪಿಯಿಂದ ಶಬರಿಮಲೆ ಯಾತ್ರೆಗೆ ಹೊರಟ್ಟಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಯೊಬ್ಬರು ಶಬರಿಮಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.


ಮೃತರನ್ನು ಉದ್ಯಾವರದ ನಿವಾಸಿ ಸುರೇಶ್ ಬಂಗೇರ (52) ಎಂದು ಗುರುತಿಸಲಾಗಿದೆ. ಇವರು ರಿಕ್ಷಾ ಚಾಲಕರಾಗಿ ದುಡಿಯುತಿದ್ದು, ಉದ್ಯಾವರ ಅಯ್ಯಪ್ಪ ಮಂದಿರದಿಂದ ಜನವರಿ 14 ರಂದು 32 ಸ್ವಾಮಿಗಳ ಜೊತೆ ರೈಲಿನ ಮೂಲಕ ಶಬರಿಮಲೆಗೆ ತೆರಳಿದ್ದು, ಶಬರಿಮಲೆಯ ಗಣೇಶ ಬೆಟ್ಟ ಹತ್ತುತ್ತಿರುವ ಸಂದರ್ಭ ಹೃದಯಾಘಾತವಾಗಿದೆ. ಕೂಡಲೇ ಚಿಕಿತ್ಸೆ ನೀಡತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಸುರೇಶ್ ಸ್ವಾಮಿಯವರು ಸುಮಾರು 28 ಬಾರಿ ಶಬರಿಮಲೆಗೆ ಹೋಗಿ‌ ಬಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *