Connect with us

DAKSHINA KANNADA

ವಿಚಾರವಾದಿಗಳ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ – ಬಾಸ್ಕರ್ ಪ್ರಸಾದ್

ಪುತ್ತೂರು ನವೆಂಬರ್ 18: ದೇಶದಲ್ಲಿ ಇಂದು ವಿಚಾರವಾದಿಗಳ ವಿರುದ್ಧ ದೇಶದ್ರೋಹದ ಕೇಸು ದಾಖಲಿಸುವ ಮೂಲಕ ವಿಚಾರವಾದಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿದೆ ಎಂದು ದಲಿತ ಸಂಘಟನೆಯ ರಾಜ್ಯ ಮುಖಂಡ ಬಾಸ್ಕರ್ ಪ್ರಸಾದ್ ಹೇಳಿದರು.


ಪುತ್ತೂರಿನಲ್ಲಿ ನಡೆದ ಸಂವಿಧಾನದ ಅನಿವಾರ್ಯತೆ ಎನ್ನುವ ವಿಷಯದ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಎನ್.ಐ.ಎ, ಭಯೋತ್ಪಾದನಾ ನಿಗ್ರಹ ಕಾಯ್ದೆಗಳನ್ನು ದುರುಪಯೋಗಪಡಿಸುವ ಕಾರ್ಯ ನಡೆಯುತ್ತಿದೆ ಎಂದ ಅವರು ವಿಚಾರವಾದಿಗಳಾದ ವರವರರಾವ್ ಅಂತವರನ್ನು ದೇಶದ್ರೋಹದ ಆರೋಪದಡಿ ಬಂಧಿಸುವ ಕೃತ್ಯಗಳು ನಡೆಯುತ್ತಿದೆ. ಸಾಹಿತಿ,ಹೋರಾಟಗಾರರನ್ನು ಬಂಧಿಸುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಇಂದು ಸಂವಿಧಾನವನ್ನು, ಕಾನೂನನ್ನು ದುರುಪಯೋಗಪಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ ಎಂದರು. ಎಸ್.ಡಿ.ಪಿ.ಐ ಮುಖಂಡರಾದ ಆನಂದ ಮಿತ್ತಬೈಲ್,ವಿಕ್ಟರ್ ಮಾರ್ಟಿನ್ ಮೊದಲಾದವರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *