DAKSHINA KANNADA
ಗುಂಡ್ಯ-ಸುಬ್ರಹ್ಮಣ್ಯ ರಸ್ತೆಗೆ ನುಗ್ಗಿದ ಗುಂಡ್ಯ ಹೊಳೆ ನೀರು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ
ಪುತ್ತೂರು ಜುಲೈ 30: ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಅಬ್ಬರಕ್ಕೆ ನದಿ ಹೊಳೆಗಳು ತುಂಬಿ ಹರಿಯುತ್ತಿದೆ. ರಸ್ತೆಯ ಮೇಲೆ ನದಿ ನೀರು ಹರಿಯಲಾರಂಭಿಸಿದ ಕಾರಣ ಜಿಲ್ಲೆಯ ಹಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ.
ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯ ಮೇಲೆ ಗುಂಡ್ಯ ಹೋಳೆ ನೀರು ಹರಿದ ಕಾರಣ ರಸ್ತೆ ಸಂಪರ್ಕ ಬಂದ್ ಆಗಿದೆ. ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯ ಚೇರು ಎಂಬಲ್ಲಿ ಹೊಳೆ ನೀರು ರಸ್ತೆ ಮೆಲೆ ಹರಿದಿದೆ. ಈ ವೇಳೆ ಶಾಲಾ ಮಕ್ಕಳು ಮನೆಗೆ ಬರುವ ಸಮಯವಾಗಿದ್ದರಿಂದ ರಸ್ತೆಯಲ್ಲೇ ಶಾಲಾ ವಾಹನ ಸಿಲುಕಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುವ ಭಕ್ತರ ವಾಹನ, ಬಸ್ ಎಲ್ಲವೂ ಅರ್ಧ ರಸ್ತೆಯಲ್ಲೇ ಜಾಮ್ ಆಗಿದೆ. ಮಳೆ ಅಬ್ಬರ ಮುಂದುವರೆ ಕಾರಣ ಪುಟ್ಟ ಮಕ್ಕಳೊಂದಿಗೆ ರಸ್ತೆಯಲ್ಲೇ ಪೋಷಕರು ಕಾಯುವ ಪರಿಸ್ಥಿತಿ ನಿರ್ಮಾಣ ವಾಗಿದೆ.
You must be logged in to post a comment Login