Connect with us

    BANTWAL

    ರೌಡಿಶೀಟರ್ ಕಂ ನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ

    ಬಂಟ್ವಾಳ, ಅಕ್ಟೋಬರ್ 21:  ರೌಡಿ ಶೀಟರ್ ಕಂ ತುಳು ಚಿತ್ರ ನಟನ ಬರ್ಬರ ಹತ್ಯೆ ನಡೆದಿದೆ. ಬಂಟ್ವಾಳ ನಿವಾಸಿ ಸುರೇಂದ್ರ ಬಂಟ್ವಾಳ ಕೊಲೆಯಾದ ನಟನಾಗಿದ್ದು,

    ಆತನ ಸ್ನೇಹಿತರೇ ಈ ಕೊಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತುಳು ಸಿನೆಮಾ ಚಾಲಿಪೋಲಿಲು ಹಾಗು ಹಲವಾರು ತುಳು ಸಿನಿಮಾಗಳಲ್ಲಿ ನಟಿಸಿರುವ ಸುರೇಂದ್ರ ಬಂಟ್ವಾಳ್ ಸವರ್ಣ ದೀರ್ಘ ಸಂಧಿ ಎನ್ನುವ ಕನ್ನಡ ಚಿತ್ರದಲ್ಲೂ ಸುರೇಂದ್ರ ನಟಿಸಿದ್ದಾರೆ‌. ಹಣಕಾಸು ವಿಚಾರದಲ್ಲಿ ಸ್ನೇಹಿತರೊಂದಿಗೆ ಮನಸ್ತಾಪವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.

    ಈತ 2018 ರ ಜೂನ್ ನಲ್ಲಿ ಬಂಟ್ವಾಳ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತಲವಾರು ಝಳಪಿಸಿ ಕೊಲೆಯ ಬೆದರಿಕೆಯನ್ನೂ ಹಾಕಿದ್ದ.ಸಾರ್ವಜನಿಕವಾಗಿ ನಡೆದ ಈ ಘಟನೆಯ ಬಳಿಕ ಪೋಲೀಸರು ಅತನನ್ನು ಬಂಧಿಸಿ ಜೈಲು ಸೇರಿದ್ದ. ಇದೀಗ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಈತನನ್ನು ಸ್ನೇಹಿತರೇ ಕೊಂದು ಹಾಕಿದ್ಧಾರೆ. ಬಂಟ್ವಾಳ ಪೋಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ‌.

    Share Information
    Advertisement
    Click to comment

    You must be logged in to post a comment Login

    Leave a Reply