KARNATAKA
ಬೈಕಿಗೆ ಬಂದ ಶ್ವಾನದಿಂದ ಸವಾರ ಮೃತ್ಯು- 3 ದಿನದ ಬಳಿಕ ಮನೆಗೆ ಬಂದು ಮಗನನ್ನು ಕಳೆದುಕೊಂಡ ತಾಯಿಯನ್ನು ಸಂತೈಸಿದ ಶ್ವಾನ..!
ದಾವಣಗೆರೆ: ಈ ಪ್ರಪಂಚನೆ ಹಾಗೇ ಯಾವಾಗ ಎಲ್ಲಿ ಬೇಕಾದ್ರೂ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಲೇ ಇವೆ. ಇದೀಗ ಬೈಕಿಗೆ ನಾಯಿ ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದ್ರೆ, ಬೈಕ್ ಗೆ ಅಡ್ಡ ಬಂದಿದ್ದ ಆ ಶ್ವಾನ ಮೂರು ದಿನದ ನಂತರ ಮೃತನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಿಸ್ಮಯಕಾರಿ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ತಿಪ್ಪೇಶ್ (21) ಎನ್ನುವ ಯುವಕ ಕಳೆದ ಗುರುವಾರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ. ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದ ತಿಪ್ಪೇಶ್, ಸಹೋದರಿಯನ್ನು ಬಿಟ್ಟು ವಾಪಸ್ ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತವಾಗಿದ್ದು.ತಲೆಗೆ ಗಂಭೀರ ಗಾಯವಾಗಿ ತಿಪ್ಪೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತಿಪ್ಪೇಶ್ ಸಾವನ್ನಪ್ಪಿದ ಮೂರನೇ ದಿನಕ್ಕೆ ಆತನ ಮನೆಗೆ ಬಂದ ಅದೇ ಶ್ವಾನ, ತಿಪ್ಪೇಶ್ ನ ಕೊಠಡಿ, ಅಡುಗೆ ಮನೆಯನ್ನು ಸುತ್ತಾಡಿದೆ. ಅಲ್ಲದೆ ತಿಪ್ಪೇಶ್ ತಾಯಿಯನ್ನು ಅಳದಂತೆ ಶ್ವಾನ ಸಮಾಧಾನ ಮಾಡುತ್ತಿರುವ ದೃಶ್ಯ ಕೂಡ ಮೊಬೈಲ್ ನಲ್ಲಿ ಸೆರೆಯಾಗಿದೆ. ನಾಯಿ ಈ ರೀತಿ ಮಾಡುತ್ತಿರುವುದನ್ನು ನೋಡಿ ಇಡೀ ಗ್ರಾಮದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
You must be logged in to post a comment Login