KARNATAKA
ಮಗನ ಕಳೆದುಕೊಂಡ ಕುಟುಂಬಕ್ಕೆ ಖುಷಿ ತಂದ ಮೊಮ್ಮಗ, ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾ ಸ್ವಾಮಿ ಪತ್ನಿ..!
ಚಿತ್ರದುರ್ಗಾ : ದರ್ಶನ್ ಮತ್ತು ಗ್ಯಾಂಗ್ನಿಂದ ಭೀಕರವಾಗಿ ಹತ್ಯೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪತ್ನಿಸಹನ ಇಂದು ಗಂಡು ಮಗುವಿಗೆ ಜನ್ಮನೀಡಿದ್ದು ಮಗನ ಕಳೆದುಕೊಂಡ ಕುಟುಂಬಕ್ಕೆ ಇದೀಗ ಮೊಮ್ಮಗ ಖುಷಿ ತಂದಿದ್ದಾನೆ.
ಬೆಳಗಿನ ಜಾವ 7 ಗಂಟೆ 1 ನಿಮಿಷಕ್ಕೆ ಮುದ್ದಾದ ಮಗುವನ್ನು ರೇಣುಕಾ ಸ್ವಾಮಿ ಕುಟುಂಬ ಬರಮಾಡಿಕೊಂಡಿತು. ರೇಣುಕಾಸ್ವಾಮಿ ಹತ್ಯೆ ಯಾಗುವ ಸಂದರ್ಭ ಪತ್ನಿ ಸಹನಾ ಗರ್ಭಿಣಿಯಾಗಿದ್ದರು. ಈ ವೇಳೆ ಪತಿಯ ಹತ್ಯೆಯಿಂದ ಸಹನ ಕಂಗಲಾಗಿದ್ದರು. ಅಲ್ಲದೆ ಪವಿತ್ರಾ ಗೌಡ ಓರ್ವ ಹೆಣ್ಣಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಹಂತಕ್ಕೆ ಹೋಗಬಾರದಿತ್ತು. ಅದರ ಬದಲು ಪೊಲೀಸರಿಗೆ ದೂರು ನೀಡಬೇಕಿತ್ತು ಎಂದು ಕಣ್ಣೀರಿಟ್ಟಿದ್ದರು.ಈಗ ನೊಂದ ಕುಟುಂಬಕ್ಕೆ ಮೊಮ್ಮಗುವಿನ ಆಗಮನ ಖುಷಿ ನೀಡಿದೆ. ರೇಣುಕಾಸ್ವಾಮಿ ಪತ್ನಿ ಸಹನ ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್ ಅರೆಸ್ಟ್ ಆದರು. ಜೂನ್ 11ರಂದು ದರ್ಶನ್ ಬಂಧನ ನಡೆದಿದೆ. ಅವರು ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿಯೇ ಇದ್ದಾರೆ. ಅವರು ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ, ಕೆಳ ಹಂತದ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ.
You must be logged in to post a comment Login