Connect with us

LATEST NEWS

4 ಕೋಟಿ ಮೌಲ್ಯದ ರಕ್ತಚಂದನ ಸಾಗಾಟ – ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಸ್ಮಗ್ಲರ್ ಗಳು

ಮೂಡುಬಿದಿರೆ : ಪುಷ್ಪಾ ಸಿನೆಮಾ ಮಾದರಿಯಲ್ಲಿ ಚಾಣಾಕ್ಷತನದಿಂದ 4 ಕೋಟಿ ಮೌಲ್ಯದ ರಕ್ತಚಂದನವನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.


ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಹಾಗೂ ಮೂಡುಬಿದಿರೆ ಪ್ರಾದೇಶಿಕ ವಲಯದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಯಲ್ಲಿ ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಈಚರ್ ವಾಹನದಲ್ಲಿ ಬೈಹುಲ್ಲು ಹೊದೆಸಿ ಸಾಗಿಸಲಾಗುತ್ತಿದ್ದ ಸುಮಾರು 8308 ಕೆಜಿ ತೂಕದ ರೂ. 4.15 ಕೋಟಿ ಮೌಲ್ಯದ , ರಕ್ತಚಂದನ ಮರದ 316 ದಿಮ್ಮಿಗಳನ್ನು ವಶಕ್ಕೆ ಪಡೆದು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಆಂಧ್ರಪ್ರದೇಶದ ಅಲಾಡಿ ರಾಜೇಶ ರೆಡ್ಡಿ, ಕೇರಳ ಪಾಲಕ್ಕಾಡ್ ನ ಸುಭಾಸ್, ತಮಿಳುನಾಡಿನ ತಿರುವಲ್ಲೂರಿನ‌ ಪಾಲರಾಜ್,ಪಾಲಕ್ಕಾಡ್ ನ ಶಾಮೀರ್ ಎಸ್., ಪಾಲಕ್ಕಾಡ್ ನ ಕುಂಞಿ ಮಹಮ್ಮದ್, ಕೊಯಮತ್ತೂರು ನ ಅನಿಲ್ ಕುಮಾರ್, ತಮಿಳುನಾಡು ತಿರುವೆಳ್ಳೂರ್ ನ ದಿನೇಶ್ ಕುಮಾರ್ ಕೆ. ಎನ್ನುವವರಾಗಿದ್ದಾರೆ. ಓರ್ವ ಪರಾರಿಯಾಗಿದ್ದಾನೆ. ಬೆಂಗಾವಲಾಗಿದ್ದ ಮಹೇಂದ್ರ ಮೊರೆಜೋ ವಾಹನವನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *