DAKSHINA KANNADA
ಅಪ್ರಾಪ್ತೆ ಮೇಲೆ ಅತ್ಯಾಚಾರ – ಯುವಕ ವಶಕ್ಕೆ

ಸುಬ್ರಹ್ಮಣ್ಯ, ಮೇ 09: ಅಪ್ರಾಪ್ತೆಯನ್ನು ಲಾಡ್ಜ್’ಗೆ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪದಲ್ಲಿ ಯುವಕನೋರ್ವನನ್ನು ಸುಬ್ರಹ್ಮಣ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಗುತ್ತಿಗಾರು ಮೆಟ್ಟಿನಡ್ಕದ ಅರುಣ್ ಗೌಡ (22) ಎಂದು ಗುರುತಿಸಲಾಗಿದೆ. ಏನೆಕಲ್ಲು ಗ್ರಾಮದ 17 ವರ್ಷದ ಯುವತಿಯನ್ನು ಪುಸಲಾಯಿಸಿ ಕಳೆದ ಮಾರ್ಚ್ ತಿಂಗಳಲ್ಲಿ ಕಡಬದ ಲಾಡ್ಜ್ಗೆ ಕರೆದೊಯ್ದು ಅರುಣ್ ಗೌಡ ಅತ್ಯಾಚಾರವೆಸಗಿದ ಪರಿಣಾಮ ಯುವತಿ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ದೂರು ದಾಖಲಿಸಲಾಗಿತ್ತು.

ಈ ಕುರಿತು ಸುಬ್ರಹ್ಮಣ್ಯ ಪೋಲೀಸರು ಪೋಕ್ಸೋ ಹಾಗೂ ದಲಿತ ದೌರ್ಜನ್ಯದಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಪ್ರಕರಣವನ್ನು ಪುತ್ತೂರು ಎ.ಎಸ್.ಪಿ. ತನಿಖೆ ನಡೆಸುತ್ತಿದ್ದಾರೆ.