Connect with us

BELTHANGADI

ಪೊಲೀಸ್ ದೂರು ನೀಡಿದ್ದಕ್ಕೆ ಅಕ್ಕ ತಂಗಿಯರ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ

ಪೊಲೀಸ್ ದೂರು ನೀಡಿದ್ದಕ್ಕೆ ಅಕ್ಕ ತಂಗಿಯರ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ

ಬೆಳ್ತಂಗಡಿ ಜುಲೈ 31: ಪೊಲೀಸ್ ದೂರು ನೀಡಿದ ಕಾರಣಕ್ಕೆ ಯುವತಿಯರಿಬ್ಬರ ಅತ್ಯಾಚಾರ ಮಾಡಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು‌ ಧರ್ಮಸ್ಥಳ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬೆಳ್ತಂಗಡಿ ಯ ಗಂಡಿಬಾಗಿಲು ಎಂಬಲ್ಲಿ ಈ ಘಟನೆ ನಡೆದಿದ್ದು, ಆರೋಪಿ ನೆರಿಯಾ ನಿವಾಸಿ BJ ಥಾಮಸ್ ವಿರುದ್ದ ಕಳೆದ ಕೆಲ ದಿನಗಳ ಹಿಂದೆ ಅಕ್ಕ-ತಂಗಿಯರಿಬ್ಬರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಥಾಮಸ್ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದಾನೆ.

ನಿನ್ನೆ ಉಜಿರೆ ಯಿಂದ ಕೆಲಸ ಮುಗಿಸಿ ಯುವತಿಯರು ಮನೆ ಕಡೆಗೆ ಆಟೋ ಹತ್ತಿದ್ದು ಆರೋಪಿ ಥಾಮಸ್ ಪಿಕ್ ಅಪ್ ವಾಹನ ಮೂಲಕ ಯುವತಿಯರಿದ್ದ ಆಟೋ ವನ್ನು ಹಿಂಬಾಲಿಸಿಕೊಂಡು ಬಂದಿದ್ದ. ಆಟೋ ಗಂಡಿಬಾಗಿಲು ಬಳಿ ಬರುತ್ತಿದ್ದಂತೆಯೇ ಥಾಮಸ್ ಪಿಕ್ ಅಪ್ ವಾಹನವನ್ನು ಆಟೋಗೆ ಡಿಕ್ಕಿ ಹೊಡೆಸಿದ್ದಾನೆ.

ಡಿಕ್ಕಿ ಯಾದ ರಭಸಕ್ಕೆ ಯುವತಿಯರಿಬ್ಬರೂ ಆಟೋದಿಂದ ಹೊರಗೆ ಬಿದ್ದಿದ್ದು,ಆರೋಪಿ ಥಾಮಸ್ ಹುಡುಗಿಯರಿಗೆ ಮನಬಂದಂತೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ರಕ್ಷಣೆ ಗೆ ಬಂದ ಆಟೋ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾನೆ. ಆಟೋ ಚಾಲಕ ಪೊಲೀಸ್ ಗೆ ಕರೆ ಮಾಡುತ್ತಿದ್ದಂತೆಯೇ ಆರೋಪಿ ಥಾಮಸ್ ಪರಾರಿಯಾಗಿದ್ದ.

ಸಂತ್ರಸ್ತ ಯುವತಿಯರಿಬ್ಬರು ಧರ್ಮಸ್ಥಳ ಠಾಣೆಯಲ್ಲಿ ಅತ್ಯಾಚಾರ ಯತ್ನ ಮತ್ತು ಕೊಲೆ ಯತ್ನ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಥಾಮಸ್ ಗಾಗಿ ಹುಡುಕಾಟ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *