ಪುತ್ತೂರು ಸೆಪ್ಟೆಂಬರ್ 28: ಅತ್ಯಾಚಾರ ಸಂತ್ರಸ್ಥೆ ಯುವತಿಯನ್ನು ಅತ್ಯಾಚಾರ ಮಾಡಿ ಆಕೆಗೆ ಗರ್ಭವತಿಯಾಗಲು ಕಾರಣರಾಗಿರುವ ಕಡಬ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಶಿವರಾಜ್ ವಿರುದ್ದ ಕಠಿಣ ಶಿಕ್ಷೆ ವಿಧಿಸಬೇಕೆಂದುೂ ಮಹಿಳಾಪರ ಸಂಘಟನೆಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಅತ್ಯಾಚಾರ ಸಂತ್ರಸ್ಥೆಯನ್ನು ಅತ್ಯಾಚಾರ ಮಾಡಿದಲ್ಲದೆ ಆಕೆಗೆ ಒತ್ತಡ ಪೂರ್ವಕ ಗರ್ಭಪಾತ ಮಾಡಿಸಿದ ಶಿವರಾಜ್ ಮೇಲೆ ಗರ್ಭಪಾತಕ್ಕೆ ಒತ್ತಡ ಹೇರಿದ ಕೇಸನ್ನೂ ಹಾಕಬೇಕೆಂದು ಮಹಿಳಾಪರ ಹೋರಾಟಗಾರ್ತಿ ಪುಲಸ್ಯಾ ರೈ ಅವರು ಪೊಲೀಸ್ ಇಲಾಖೆಗೆ ಒತ್ತಾಯ ಮಾಡಿದ್ದಾರೆ.