LATEST NEWS
ರಮಾನಾಥ ರೈ ಮತಬ್ಯಾಂಕ್ ಸೃಷ್ಠಿಗೆ ಸಿಎಂ ಕಿವಿ ಚುಚ್ಚುವ ಕೆಲಸ – ನಳಿನ್ ಕುಮಾರ್ ಕಟೀಲ್

ರಮಾನಾಥ ರೈ ಮತಬ್ಯಾಂಕ್ ಸೃಷ್ಠಿಗೆ ಸಿಎಂ ಕಿವಿ ಚುಚ್ಚುವ ಕೆಲಸ – ನಳಿನ್ ಕುಮಾರ್ ಕಟೀಲ್
ಉಡುಪಿ ಜನವರಿ 7: ರಮಾನಾಥ ರೈ ಗೆ ಸೋಲಿನ ಭಯ ಕಾಡುತ್ತಿದ್ದು, ಭಯದ ಪರಿಣಾಮ ಮತಬ್ಯಾಂಕ್ ಸೃಷ್ಠಿಸಲು ಸಿಎಂ ಕಿವಿ ಚುಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಬಶೀರ್ ಕೊಲೆ ಹೇಯ ಕೃತ್ಯವಾಗಿದ್ದು ಅದನ್ನು ಖಂಡಿಸುತ್ತೇನೆ ಎಂದು ಹೇಳಿದರು. ಅಲ್ಲದೆ ಎಲ್ಲರಿಗೂ ಬದುಕುವ ಹಕ್ಕಿದೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಕಾನೂನು ಸುವ್ಯವಸ್ಥೇ ಹದಗೆಟ್ಟ ಪರಿಣಾಮ ಕರಾವಳಿ ಜಿಲ್ಲೆಯಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಬಶೀರ್ ಕುಟುಂಬಕ್ಕೆ 50ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಗೂಂಡಾಗಿರಿ ಮತ್ತೊಮ್ಮೆ ತಾಂಡವವಾಡುತ್ತಿದೆ, ದರೋಡೆಕೋರರು ಸಕ್ರೀಯರಾಗಿದ್ದು, ಮತಾಂಧ ಶಕ್ತಿಗಳು ಎಚ್ಚೆತ್ತುಕೊಂಡಿವೆ ಇದಕ್ಕೆ ರಾಜ್ಯ ಸರಕಾರದ ಕಾನೂನು ಸುವ್ಯವಸ್ಥೇ ವೈಫಲ್ಯ ಕಾರಣ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳು ದುರಂಹಕಾರದಿಂದ ವರ್ತಿಸುತ್ತಿದ್ದು, ಆಡಳಿತ, ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ ಎಂದು ಹೇಳಿದರು.
ಸಿಎಂಗೆ ಮಾನ ಮರ್ಯಾದೆ ಇದ್ದಿದ್ರೆ ರಾಜಿನಾಮೆ ಕೊಡ್ತಿದ್ರು ಎಂದು ಹೇಳಿದರು. ಸಿಎಂ ಹೋದಲ್ಲಿ ಬಲಿದಾನವಾಗ್ತಿದೆಯೆಂದ್ರೆ ಸಿಎಂ ಪ್ರವಾಸ ಎಂಥದ್ದು ಯೋಚನೆ ಮಾಡಬೇಕು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಉಡುಪಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.