Connect with us

LATEST NEWS

ದಕ್ಷಿಣಕನ್ನಡ – ಮತ್ತೆ ಬಿರುಸು ಪಡೆದ ಮಳೆ

ಮಂಗಳೂರು ಜುಲೈ 08 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆ ಕೊಂಚ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೆ ಪ್ರಾರಂಭವಾಗಿದೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಮತ್ತೆ ಮುಂದುವರೆದಿದೆ.


ನಿನ್ನೆ ಶುಕ್ರವಾರ ಹಗಲು ಮಳೆ ಸ್ವಲ್ಪ ಮಟ್ಟಿನ ವಿರಾಮ ಪಡೆದಿತ್ತು, ಆದರೆ ರಾತ್ರಿ ಇಡೀ ಧಾರಾಕಾರ‌ ಮಳೆಯಾಗಿದ್ದು, ಶನಿವಾರವೂ ಜಿಲ್ಲೆಯಾದ್ಯಂತ ಬಿರುಸಿನ‌ ಮಳೆಯಾಗುತ್ತಿದೆ. ಮಳೆಯಿಂದಾಗಿ‌ ಮಂಗಳವಾರ ವಾರದಿಂದ ಶುಕ್ರವಾರದವರೆಗರ ಜಿಲ್ಲಾಡಳಿತವು ಶಾಲೆಗಳಿಗೆ ರಜೆ‌ ನೀಡಿತ್ತು. ಶನಿವಾರ ಶಾಲೆಗಳು ಪುನರಾರಂಭಗೊಂಡಿವೆ.


ಮೂಲ್ಕಿ ತಾಲ್ಲೂಕಿನ ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಶುಕ್ರವಾರ ರಾತ್ರಿ ರಸ್ತೆಗೆ ಮರ ಬಿದ್ದಿದ್ದು, ರಾತ್ರಿಯೇ ಅದನ್ನು ತೆರೆವುಗೊಳಿಸಲಾಯಿತು. ಉಳ್ಳಾಲ ನಗರಸಭೆ ವ್ಯಾಪ್ತಿಯ ಸೇವಂತಿ ಗುಡ್ಡೆಯಲ್ಲಿ ಗುಡ್ಡ ಜರಿದು ಭಾರಿ ಗಾತ್ರದ ಕೆಂಪುಕಲ್ಲು ಉರುಳಿ ಬಿದ್ದಿದ್ದು, ರಾತ್ರಿಯೇ‌ ಅದನ್ನು ತೆರವುಗೊಳಿಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *