LATEST NEWS
ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಗೆ ಗೇಟ್ ಪಾಸ್…!!
ಮಂಗಳೂರು ಎಪ್ರಿಲ್ 06: ಅನಿರೀಕ್ಷಿತ ಬೆಳವಣೆಗೆಯೊಂದರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಆರ್ ರಮೇಶ್ ಈ ಆದೇಶ ಹೊರಡಿಸಿದ್ದು, ರಹೀಂ ಉಚ್ಚಿಲ ಇವರನ್ನು ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದ್ದಾರೆ.
ಇನ್ನು ಪದಚ್ಯುತಿಗೆ ಸ್ಪಷ್ಟ ಕಾರಣ ಆದೇಶದಲ್ಲಿ ತಿಳಿಸಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಹೀಂ ಉಚ್ಚಿಲ್, ಪದಚ್ಯುತಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದೇಶ ಬಂದ ನಂತರ ನನಗೂ ವಿಷಯ ತಿಳಿಯಿತು. ಎರಡು ಬಾರಿ ಅಕಾಡಮಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವ ತೃಪ್ತಿ ಇದೆ ಎಂದಿದ್ದಾರೆ.
You must be logged in to post a comment Login