DAKSHINA KANNADA
ಕರೋನಾ ಎಫೆಕ್ಟ್ ಪುತ್ತೂರು ಕೆಎಸ್ಆರ್ ಟಿಸಿ ವಿಭಾಗದ 47 ಬಸ್ ಟ್ರಿಪ್ ಕಟ್

ಕರೋನಾ ಎಫೆಕ್ಟ್ ಪುತ್ತೂರು ಕೆಎಸ್ಆರ್ ಟಿಸಿ ವಿಭಾಗದ 47 ಬಸ್ ಟ್ರಿಪ್ ಕಟ್
ಪುತ್ತೂರು ಮಾ.19: ಕೊರೊನಾ ಎಫೆಕ್ಟ್ ನಿಂದಾಗಿ ಪ್ರಯಾಣಿಕರಿಲ್ಲದೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗ ಭಾರೀ ನಷ್ಟ ಅನುಭವಿಸುವಂತಾಗಿದೆ
ಕರೋನಾ ಹಿನ್ನಲೆ ಪ್ರಯಾಣಿಕರ ಕೊರತೆಯಿಂದಾಗಿ ಪುತ್ತೂರು ಕೆಎಸ್ಆರ್ ಟಿಸಿ ಡಿಪೋದಿಂದ ಸಂಚರಿಸುವ 47 ಬಸ್ ಗಳ ಟ್ರಿಪ್ ಗಳನ್ನ ಕಟ್ ಮಾಡಲಾಗಿದೆ. ಸುಬ್ರಹ್ಮಣ್ಯ- ಬೆಂಗಳೂರು, ಧರ್ಮಸ್ಥಳ – ಬೆಂಗಳೂರು, ಪುತ್ತೂರು-ಬೆಂಗಳೂರು, ಮತ್ತು ಬಿ.ಸಿ.ರೋಡ್- ಬೆಂಗಳೂರು ನಡುವೆ ಸಂಚರಿಸುವ ಬಸ್ ಗಳು ರದ್ದು ಮಾಡಲಾಗಿದ್ದು, ದಿನಕ್ಕೆ ಸುಮಾರು 4 ಲಕ್ಷ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದೆ. ಕೊರೊನಾ ವೈರಾಣು ಹರಡುವ ಭೀತಿ ಹಿನ್ನಲೆ ಪುತ್ತೂರು ಡಿಪೋದಲ್ಲಿ ಬಸ್ ಹಾಗೂ ಬಸ್ ಶೆಡ್ ಗಳ ಕ್ಲೀನಿಂಗ್ ಕಾರ್ಯಾಚರಣೆಯೂ ಆರಂಭಿಸಲಾಗಿದೆ.
