Connect with us

DAKSHINA KANNADA

ಪುತ್ತೂರು – ಹಣದ ಅಮಿಷ, ಅಬರ್ಷನ್ ವಿಚಾರ ನಾನು ಮಾತಾಡಿಲ್ಲ – ಮುರಳೀಕೃಷ್ಣ ಹಸಂತ್ತಡ್ಕ

ಪುತ್ತೂರು ಜುಲೈ 03: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆಯನ್ನು ಹಿಂದೂ ಸಂಘಟನೆಗಳ ನಿಯೋಗ ಭೇಟಿ ಮಾಡಿ ಸಂತ್ರಸ್ತ ಯುವತಿ ಮತ್ತು ಮಗುವಿನ ಆರೋಗ್ಯ ವಿಚಾರಿಸಿದೆ.


ಹಿಂದೂ ಸಂಘಟನೆ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ನೇತೃತ್ವದ ನಿಯೋಗ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ತಮ್ಮ ಮೇಲಿನ ಆರೋಪಗಳಿಗೆ ಸಂತ್ರಸ್ಥೆ ತಾಯಿ ಜೊತೆ ಜಂಟಿಯಾಗಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ವಿಷಯವನ್ನು ಸಂತ್ರಸ್ತೆ ತಾಯಿ ತಿಳಿಸಿದಾಗ ನಾವು ಹೆಣ್ಣಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದೇವೆ. ಆ ಸಂದರ್ಭದಲ್ಲಿ ಕೇಸು ಒಂದೇ ಪರಿಹಾರವಲ್ಲ ಎಂದಿದ್ದೇವೆ, ಎರಡು ಮನಸ್ಸುಗಳನ್ನು ಸೇರಿಸುವ ಪ್ರಯತ್ನ ಮಾಡಬೇಕೆಂದು ಹೇಳಿದ್ದೆ ಅದು ಬಿಟ್ಟರೆ ಹಣದ ಅಮಿಷ,ಅಬರ್ಷನ್ ವಿಚಾರ ನಾನು ಮಾತಾಡಿಲ್ಲ ಎಂದರು.

ಈ ವಿಚಾರ ರಸ್ತೆಯಲ್ಲಿ ನಿಂತು ಮಾತನಾಡುವ ವಿಚಾರವಲ್ಲ, ನಾವು ಹೆಣ್ಣಿಗೆ ನ್ಯಾಯ ಸಿಗುವ ತನಕ ಅವರೊಂದಿಗೆ ಇರುತ್ತೇವೆ. ಅನ್ಯಾಯವೆಸಗಿದ ಆರೋಪಿಯನ್ನು ತಂದು ಮದುವೆ ಮಾಡಿಸಲು ನಮಗೆ ಗೊತ್ತಿದೆ. ಆದರೆ ಹೀಗೆ ಮದಯವೆ ಮಾಡಿಸಿದಲ್ಲಿ ಅವರು ಮುಂದೆ ಹೇಗಿರುತ್ತಾರೆ ಅನ್ನೋದನ್ನು ಹೇಳೋಕಾಗಲ್ಲ. ಈ ಕಾರಣಕ್ಕಾಗಿ ಪರಸ್ಪರ ಸೌಹಾರ್ದಯುತವಾಗಿ ಮುಗಿಸಲು ಯತ್ನಿಸಿದ್ದೇವೆ ಎಂದರು.
ಈ ವೇಳೆ ಮಾತನಾಡಿದ ಸಂತ್ರಸ್ತೆ ತಾಯಿ ನಾನು ಯಾವುದೇ ಸಂಘಟನೆಯಲ್ಲಿ ಸೇರಿದವಳಲ್ಲ, ನನ್ನ ಮಗಳಿಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿದವರ ಬಳಿ ನಾನು ಹೋಗಿದ್ದೇನೆ. ನನಗೆ ನನ್ನ ಮಗಳಿಗೆ ನ್ಯಾಯ ಒದಗಿಸಬೇಕು, ವಂಚನೆ ಮಾಡಿದ ಹುಡುಗನನ್ನು ತರಿಸಿ ಅವನಿಗೆ ಶಿಕ್ಷೆ ಕೊಡಿ ಎಂದು ನಾನು ಹೇಳೋದಿಲ್ಲ, ಅವನನ್ನು ನನ್ನ ಮಗಳ ಜೊತೆ ಮದುವೆ ಮಾಡಿಸಿ, ಹುಟ್ಟಿದ ಮಗುವಿಗೆ ಅದರ ತಂದೆಯ‌ ಸ್ಥಾನವನ್ನು ತುಂಬಿಸಿ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *