Connect with us

    DAKSHINA KANNADA

    ಪುತ್ತೂರು: ಗಾಂಧಿ ಪ್ರತಿಮೆ ತಲೆಗೆ ಟೀ ಶರ್ಟ್ ಹಾಕಿ ವಿಕೃತಿ

    ಪುತ್ತೂರು, ಜುಲೈ 02 : ಗಾಂಧಿ ಪ್ರತಿಮೆಗೆ ಟೀ ಶರ್ಟ್‌ ಹಾಕಿ ಕನ್ನಡಕ ತೆಗೆದು ವಿರೂಪಗೊಳಿಸಿದ ಘಟನೆ ಪುತ್ತೂರು ನಗರದ ಹೃದಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ನಡೆದಿದೆ.

    ಈ ಘಟನೆ ನಿನ್ನೆ ಬೆಳಕಿಗೆ ಬಂದಿದ್ದು ಕಿಡಿಗೇಡಿಗಳು ಗಾಂಧಿ ಪ್ರತಿಮೆಯ ಕನ್ನಡಕ ತೆಗೆದು ಪ್ರತಿಮೆಯ ತಲೆಗೆ ಟೀ ಶರ್ಟ್‌ ಇಟ್ಟು, ಕನ್ನಡಕ ತೆಗೆದು ಅವಮಾನಗೊಳಿಸಿದ್ದಾರೆ.

    ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪುತ್ತೂರು ಡಿವೈಎಸ್​ಪಿ ಡಾ. ಗಾನ ಪಿ.ಕುಮಾರ್‌ ಮತ್ತು ಪುತ್ತೂರು ನಗರ ಠಾಣೆಯ ಸರ್ಕಲ್‌ ಇನ್ಸ್​ಪೆಕ್ಟರ್​ ಗೋಪಾಲ್‌ ನಾಯ್ಕ್‌ ಅವರು ಕಿಡಿಗೇಡಿಗಳ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದ ಪುತ್ತೂರಿನ ಗಾಂಧಿ ಕಟ್ಟೆ ಸಮಿತಿಯವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply