DAKSHINA KANNADA
ಹೈಟೆನ್ಶನ್ ವಿದ್ಯುತ್ ಪ್ರವಹಿಸಿ ಒರ್ವ ಸಾವು. 10 ಮಂದಿ ಗಂಭೀರ ಗಾಯ
ಹೈಟೆನ್ಶನ್ ವಿದ್ಯುತ್ ಪ್ರವಹಿಸಿ ಒರ್ವ ಸಾವು. 10 ಮಂದಿ ಗಂಭೀರ ಗಾಯ
ಮಂಗಳೂರು, ಜುಲೈ 18 : ಹೈಟೆನ್ಶನ್ ವಿದ್ಯುತ್ ಪ್ರವಹಿಸಿದ ಕಾರಣ ಒರ್ವ ಮೃತಪಟ್ಟು 10 ಮದಿ ಗಾಯಗೊಂಡ ಘಟನೆ ಮಂಗಳೂರು ಹೊರ ವಲಯದ ಕಾವೂರಿನಲ್ಲಿ ಸಂಭವಿಸಿದೆ.
ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಎಡಪದವು ನಿವಾಸಿ ಗಣೇಶ್ (55) ಎಂದು ಗುರುತ್ತಿಸಲಾಗಿದೆ.
ಮಂಗಳೂರು ಹೊರವಲಯದ ಕಾವೂರು ಮರವೂರಿನಲ್ಲಿ ವಿದ್ಯುತ್ ಕಂಬ ದುರಸ್ತೀ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಕಾರ್ಮಿಕರೆಲ್ಲರು ಕೆಇಬಿ ಕಂಟ್ರಾಕ್ಟ್ ನಡಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಕಾವೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login