Connect with us

    BANTWAL

    ಚಾಲಕನ ನಿಯಂತ್ರಣ ತಪ್ಪಿ ಮಸೀದಿ ಆವರಣ ಗೋಡೆಗೆ ನುಗ್ಗಿದ ಓಮ್ನಿ ಕಾರು

    ಚಾಲಕನ ನಿಯಂತ್ರಣ ತಪ್ಪಿ ಮಸೀದಿ ಆವರಣ ಗೋಡೆಗೆ ನುಗ್ಗಿದ ಓಮ್ನಿ ಕಾರು

    ಬಂಟ್ವಾಳ ಅಕ್ಟೋಬರ್ 22: ಚಾಲಕನ‌ ನಿಯಂತ್ರಣ ತಪ್ಪಿದ ಓಮ್ನಿ ಕಾರುವೊಂದು ಮಸೀದಿಯ ಆವರಣಗೋಡೆಯೊಳಗೆ ನುಗ್ಗಿದ ಪರಿಣಾಮ ಚಾಲಕ ಸೇರಿ ಒಟ್ಟು ಐವರು ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ 10ನೇ ಮೈಲುಕಲ್ಲು ಎಂಬಲ್ಲಿ ಮಂಗಳವಾರ ನಡೆದಿದೆ.

    ಹತ್ತನೇ ಮೈಲುಕಲ್ಲು ನಿವಾಸಿ ಇಸ್ಮಾಯಿಲ್, ಸುಲೈಮಾನ್ ಗಾಯಗೊಂಡವರೆಂದು ತಿಳಿದುಬಂದಿದ್ದು, ಕಾರಿನಲ್ಲಿದ್ದ ಮೂವರ ಪ್ರಯಾಣಿಕರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

    ಪ್ರಸಾದ್ ನೇತ್ರಾಲಯಕ್ಕೆ ಸೇರಿದ ಓಮ್ನಿ ಕಾರು ಬಿ.ಸಿ.ರೋಡ್ ನಿಂದ ಮಂಗಳೂರು ಕಡೆಗೆ ತೆರಳುತ್ತಿರುವಾಗ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಸಮೀಪದ ಹತ್ತನೇ ಮೈಲು ಕಲ್ಲು ಎಂಬಲ್ಲಿ ಚಾಲಕನ‌ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಪರಿಣಾಮ ಹೆದ್ದಾರಿ ಪಕ್ಕದಲ್ಲಿರುವ ತ್ವಾಹಾ ಜುಮಾ ಮಸೀದಿಯ ಆವರಣಗೋಡೆಯನ್ನು ಏರಿ ನಿಂತಿದೆ. ಈ ವೇಳೆ ಮಸೀದಿ ಆವರಣದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ‌. ಘಟನೆಯಿಂದ ಕಾರಿನ ಮುಂಭಾಗ ಜಖಂಗೊಂಡಿದ್ದು, ಮಸೀದಿಗೆ ಹಾನಿಯಾಗಿದೆ. ಅಪಘಾತ ದೃಶ್ಯ ಮಸೀದಿಯ‌ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply