Connect with us

    LATEST NEWS

    ಮಂಗಳೂರು – ಎನ್ಐಎ ವಶಕ್ಕೆ ತೊಕ್ಕೊಟ್ಟುವಿನ ಮಝೀನ್ ಅಬ್ದುಲ್ ರೆಹಮಾನ್

    ಮಂಗಳೂರು ಜನವರಿ 11: ಶಿವಮೊಗ್ಗ ಬಾಂಬ್ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನಲ್ಲಿ ಓರ್ವನನ್ನು ಎನ್ಐಎ ವಶಕ್ಕೆ ಪಡೆದಿದೆ.


    ಬಂಧಿತನನ್ನು ಮಂಗಳೂರಿನ ತೊಕ್ಕೊಟ್ಟುವಿನ ಬಬ್ಬುಕಟ್ಟೆ ನಿವಾಸಿ ಮಝೀನ್ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಶಂಕಿತ ಉಗ್ರ ಮಾಝ್ ಮುನೀರ್ ನೀಡಿದ ಮಾಹಿತಿ ಯ ಆಧಾರದಲ್ಲಿ ಅಬ್ದುಲ್ ರೆಹಮಾನ್ ನ್ನು ಎನ್ ಐ ಎ ವಶಕ್ಕೆ ಪಡೆದಿದೆ.
    ಅಲ್ಲದೆ ದಾವಣಗೆರೆಯ ಹೊನ್ನಾಳಿಯ ನೂರಾನಿ ಮಸೀದಿ ಹತ್ತಿರದ ದೇವನಾಯಕನಹಳ್ಳಿ ನಿವಾಸಿ ನದೀಮ್ ಅಹ್ಮದ್ ಕೆ.ಎ. ಎಂಬಾತನನ್ನು ಎನ್ಐಎ ಅರೆಸ್ಟ್ ಮಾಡಿದೆ.


    ಮಾಜ್ ಮುನೀರ್, ಮಝಿನ್ ಅಬ್ದುಲ್ ರೆಹಮಾನ್ ನನ್ನು ನೇಮಕ ಮಾಡಿಕೊಂಡಿದ್ದು, ಸೈಯದ್ ಯಾಸಿನ್ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ನದೀಮ್ ಕೆ ಎ ನನ್ನು ನೇಮಕ ಮಾಡಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

    ಆರೋಪಿಗಳು ಇಸ್ಲಾಮಿಕ್ ಸ್ಟೇಟ್‌ನ ಚಟುವಟಿಕೆಗಳನ್ನು ಮುಂದುವರಿಸಲು ದೊಡ್ಡ ಪಿತೂರಿಯ ಭಾಗವಾಗಿ ವಿಧ್ವಂಸಕ ಕೃತ್ಯಗಳನ್ನು ಮಾಡಲು ಮುಂದಾಗಿದ್ದರು.ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿವೆ.

     

    Share Information
    Advertisement
    Click to comment

    You must be logged in to post a comment Login

    Leave a Reply