LATEST NEWS
ಮುಂಬೈ ಸಾಂತಾಕ್ರೂಜ್ ಕೊಲೆ ಪ್ರಕರಣ : ದಯಾ ನಾಯಕ್ ತಂಡದಿಂದ ಆರೋಪಿಗಳ ಬಂಧನ….!!
ಮುಂಬೈ ಅಕ್ಟೋಬರ್ 05 : ಮಹಾರಾಷ್ಟ್ರದ ಮುಂಬೈ ನಗರದ ಸಾಂತಾಕ್ರೂಜ್ ನಲ್ಲಿ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದ ಆರೋಪಿಗಳನ್ನು ಬಾಂದ್ರಾ ಕ್ರೈಮ್ ಬಾಂಚ್ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಪ್ಟೆಂಬರ್ 28ರಂದು ಸಾಂತಾಕ್ರೂಜ್ ನಲ್ಲಿ ರಾಜೇಶ್ ಕುಮಾರ್ ಶುಕ್ಲಾ ಎಂಬವರ ಕೊಲೆಯಾಗಿತ್ತು.ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿ ದಯಾ ನಾಯಕ್ ತಂಡ 30ರಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಯ ಶಂಕರ್ ಲಕ್ಷ್ಮೀ ಕಾಂತ್ ಮಿಶ್ರಎಂಬವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಪರಿಚಿತ ಆರೋಪಿಗಳು ಪೇವರ್ ಬ್ಲಾಕ್ ಹಾಗೂ ಇತರೆ ಆಯುಧಗಳಿಂದ ಸಂತ್ರಸ್ತಯ ತಲೆಗೆ ಹೊಡೆದಿದ್ದರು. ಸಂತ್ರಸ್ತೆನ್ನು ಕೊಂದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಚಾರಣೆ ವೇಳೆ ಮೃತನೊಂದಿಗಿನ ವೈಯುಕ್ತಿಕ ವೈಷಮ್ಯದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
You must be logged in to post a comment Login