Connect with us

LATEST NEWS

ನೈತಿಕ ಪೊಲೀಸ್ ಗಿರಿ – ಕ್ಲಾಸ್ ಮೇಟ್ ಜೊತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ…!!

ಮೂಡುಬಿದಿರೆ ಅಗಸ್ಟ್ 23 : ಹಿಂದೂ ಧರ್ಮದ ಸಹಪಾಠಿ ವಿಧ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ಯುವಕರ ಗುಂಪೊಂದು ಮುಸ್ಲಿಂ ವಿಧ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ಮೂಡಬಿದಿರೆ ಬಸ್ ನಿಲ್ದಾಣ ಬಳಿ ಸೋಮವಾರ ರಾತ್ರಿ ನಡೆದಿದ್ದು. ಮೂಡುಬಿದಿರೆ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.


ಕಾಲೇಜೊಂದರ ವಿದ್ಯಾರ್ಥಿನಿ ಬೆಂಗಳೂರಿಗೆ ತೆರಳಲು ಬಸ್‌ಗಾಗಿ ಸೋಮವಾರ ರಾತ್ರಿ ಬಸ್‌ನಿಲ್ದಾಣದ ಬಳಿ ಕಾಯುತ್ತಿದ್ದ ವೇಳೆ ಆಕೆಯ ಸಹಪಾಠಿಯಾಗಿದ್ದ ಕೋಟೆಬಾಗಿಲಿನ ಮುಸ್ಲಿಂ ಯುವಕ ಆಕೆ ಜೊತೆ ಮಾತನಾಡುತ್ತಾ ನಿಂತಿದ್ದ.

ಇದನ್ನು ಕೆಲವು ಸ್ಥಳಿಯರು ಗಮನಿಸಿದ್ದರು. ವಿದ್ಯಾರ್ಥಿನಿ ಕೆಎಸ್ಆರ್ಟಿಸಿ ಬಸ್ ಹತ್ತಿ ತೆರಳಿದ ನಂತರ ಯುವಕರ ತಂಡವೊಂದು ವಿದ್ಯಾರ್ಥಿಗೆ ಹಲ್ಲೆ ನಡೆಸಿತ್ತು.

ಹಲ್ಲೆಗೊಳಗಾದ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *