Connect with us

    JYOTHISHYA

    ಹುಣ್ಣಿಮೆಯಂದು ಧನಾತ್ಮಕ ಕಿರಣಗಳನ್ನು ಹೊರ ಸೂಸುವ ಚಂದ್ರ

    ಹಿಂದೂ ಧರ್ಮದಲ್ಲಿ ಚಂದ್ರನಿಗೆ ಬಹಳ ಮಹತ್ವವಿದೆ. ಇದು ಸೃಷ್ಟಿ, ಜೀವನ, ಭಾವನೆಗಳು, ಮನಸ್ಥಿತಿ, ಮನಸ್ಸಿನ ಹಲವು ಅಂಶಗಳನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಇವೆಲ್ಲವೂ ಚಂದ್ರನಿಂದ ನಿಯಂತ್ರಿಸಲ್ಪಡುತ್ತದೆ ಎಂದು ನಂಬಲಾಗಿದೆ. ಈ ಗ್ರಹವು ಪ್ರೀತಿ, ಒಂಟಿತನ, ಮನಸ್ಥಿತಿ ಬದಲಾವಣೆಗಳೊಂದಿಗೆ ಸಂಬಂಧಿಸಿದೆ. ಹುಣ್ಣಿಮೆ ಸಮಯದಲ್ಲಿ ಚಂದ್ರನು ತನ್ನ ಧನಾತ್ಮಕ ಶಕ್ತಿಯನ್ನು ಭೂಮಿಗೆ ಹೊರ ಸೂಸುತ್ತಾನೆ ಎಂದು ನಂಬಲಾಗಿದೆ. ಇದು ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ದೀರ್ಘಾಯುಷ್ಯವನ್ನು ಸೂಚಿಸುತ್ತದೆ. ಇದಕ್ಕೆ ವಿರುದ್ಧವಾಗಿ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನನ್ನು ನೋಡಬಾರದು. ಏಕೆಂದರೆ ಆ ಸಮಯದಲ್ಲಿ ಚಂದ್ರನ ಕಿರಣಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಚಂದ್ರ ಅತ್ಯಂತ ವೇಗವಾಗಿ ಚಲಿಸುವ ಗ್ರಹವಾಗಿರುವುದರಿಂದ ಎರಡೂವರೆ ದಿನಗಳಲ್ಲಿ ತನ್ನ ಸ್ಥಾನವನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಯಿಸುತ್ತಾನೆ.

    ಜಾತಕದಲ್ಲಿ ಚಂದ್ರ ಬಲಶಾಲಿಯಾಗಿದ್ದರೆ ಉತ್ತಮ ಯೋಗವಿರುತ್ತದೆ. ಜಾತಕನ ಲಗ್ನ ಮನೆಯಲ್ಲಿ ಚಂದ್ರನಿದ್ದರೆ ವ್ಯಕ್ತಿ ನೋಡಲು ಸುಂದರ, ಆಕರ್ಷಕ ಮತ್ತು ಸೂಕ್ಷ್ಮ ಸ್ವಭಾವದವನಾಗಿರುತ್ತಾನೆ. ಹೆಚ್ಚಾಗಿ ಅವರು ಕಲಾತ್ಮಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಜಾತಕದಲ್ಲಿ ಚಂದ್ರ ಬಲಶಾಲಿಯಾಗಿದ್ದರೆ ವ್ಯಕ್ತಿಯ ಮಾನಸಿಕ ಸ್ಥಿತಿಯೂ ಬಲವಾಗಿರುತ್ತದೆ. ಅವನು ಸಂತೋಷವಾಗಿರುತ್ತಾನೆ.

    ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದರೆ. ಜೀವನದಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಾನೆ. ಇದು ಮನಸ್ಥಿತಿ, ಮನಸ್ಸು, ಭಾವನೆಗಳನ್ನು ಸಹ ಸೂಚಿಸುತ್ತದೆ. ಒಬ್ಬರ ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದರೆ ಖಿನ್ನತೆ, ಕೆಟ್ಟ ಮನಸ್ಥಿತಿ ನಕಾರಾತ್ಮಕತೆ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದಾಗುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಕೆಲವು ಪರಿಹಾರಗಳನ್ನು ಕೈಗೊಳ್ಳಬಹುದು.

    ಜಾತಕದಲ್ಲಿ ಚಂದ್ರನ ಸ್ಥಾನ ಬಲಗೊಳ್ಳಲು ಪರಿಹಾರ

    ಚಂದ್ರನಿಗೆ ಇಷ್ಟವಾದ ಬಣ್ಣ ಬಿಳಿ. ಜಾತಕದಲ್ಲಿ ಚಂದ್ರ ಬಲಶಾಲಿಯಾಗಿದ್ದರೆ ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಜೋಡಿಸಿ ಕಿರುಬೆರಳಿಗೆ ಧರಿಸಬೇಕು. ಸೋಮವಾರ ಉಪವಾಸ ಮಾಡಿದರೆ ಚಂದ್ರನ ಸ್ಥಾನವನ್ನು ಸುಧಾರಿಸುತ್ತದೆ. ಶಿವನು ಚಂದ್ರನ ಅಧಿಪತಿ. ಸೋಮವಾರ ಮಹಾದೇವನ ಆರಾಧನೆ ಮಾಡಿ. ನಿಯಮಿತವಾಗಿ ಚಂದ್ರ ಮಂತ್ರಗಳನ್ನು ಪಠಿಸಿ.

    ಓಂ ಭೂರ್ಭವಃ ಸ್ವಃ
    ಅಮೃತಂಗಾಯ ವಿದ್ಮಹೇ
    ಕಾಲರೂಪಾಯ ಧೀಮಹಿ
    ತನ್ನೋ ಸೋಮೋ ಪ್ರಚೋದಯಾತ್‌
    ಓಂ ಇಮಂ ದೇವಾ ಅಸಪತ್ನಂ ಗ್ವಂ ಸುವಧ್ಯಂ|
    ಮಹತೇ ಕ್ಷತ್ರಾಯ ಮಹತೇ ಜ್ಯೇಷ್ಠಾಯ
    ಮಹತೇ ಜಾನರಾಜ್ಯಾಯೇಂದ್ರಸ್ಯೇಂದ್ರಿಯಾಯ
    ಹಮ್ಮಮುಧ್ಯ ಪುತ್ರಮಮುಧ್ಯೈ ಪುತ್ರಮಸ್ಯೈ
    ವಿಶ ವೋಮೀ ರಾಜಃ ಸೋಮೋಸ್ಮಾಕಂ ಬ್ರಾಹ್ಮಾಣಾನಾ ಗ್ವಂ ರಾಜಾ

    ಇದರೊಂದಿಗೆ ಅಕ್ಕಿ, ಹಾಲು, ಮೊಸರು, ಸಕ್ಕರೆ ಸೇರಿದಂತೆ ಬಿಳಿ ಆಹಾರ ಪದಾರ್ಥಗಳನ್ನು ಇತರರಿಗೆ ದಾನ ಮಾಡಿ. ಅಗತ್ಯವಿದ್ದರೆ ಬಿಳಿ ಹೊದಿಕೆಯನ್ನು ಸಹ ದಾನ ಮಾಡಬಹುದು. ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಉಪವಾಸ ಮಾಡಿ ಚಂದ್ರನ ಪೂಜೆ ಮಾಡಿ. ಬೆಳ್ಳಿಯ ಕಲಶದಿಂದ ನೀರು ಹಾಗೂ ಹಾಲನ್ನು ಚಂದ್ರನಿಗೆ ಅರ್ಪಿಸಿ. ಇದನ್ನು ನಿರಂತರವಾಗಿ ಮಾಡುವುದರಿಂದ ಜಾತಕದಲ್ಲಿ ಚಂದ್ರನ ಸ್ಥಾನ ಸುಧಾರಿಸುತ್ತದೆ. ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ
    ದೈವಜ್ಞ ಪಂಡಿತ್ ಕೃಷ್ಣ ಭಟ್
    ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು
    9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ

    Share Information
    Advertisement
    Click to comment

    You must be logged in to post a comment Login

    Leave a Reply