Connect with us

LATEST NEWS

ರೆಡ್ ಅಲರ್ಟ್ ಜೊತೆ ಕೇರಳಕ್ಕೆ ಎಂಟ್ರಿ ಕೊಟ್ಟ ಮಾನ್ಸೂನ್

ತಿರುವನಂತಪುರಂ ಮೇ 24: ನಿರೀಕ್ಷೆಯಂತೆ ಕೇರಳಕ್ಕೆ ಮಾನ್ಸೂನ್ ಎಂಟ್ರಿಕೊಟ್ಟಿದ್ದು, 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿದೆ.
ಈ ಕುರಿತಂತೆ ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದ್ದೆ. ಈಗಾಗಲೇ ಕೇರಳ ರಾಜ್ಯದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಶನಿವಾರ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆ ನೀಡಿದೆ.


ರಾಜ್ಯವು ಹೆಚ್ಚು ತೀವ್ರವಾದ ಮಳೆಗೆ ಸಿದ್ಧವಾಗುತ್ತಿದ್ದಂತೆ ಹಲವಾರು ಪ್ರದೇಶಗಳಲ್ಲಿ ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿತು. ತೀವ್ರ ಹವಾಮಾನದ ಹಿನ್ನೆಲೆಯಲ್ಲಿ, ಕಾಸರಗೋಡು ಮತ್ತು ಕಣ್ಣೂರಿನ ಎಲ್ಲಾ ತಾಣಗಳು (ಮೇ 27 ರವರೆಗೆ), ವಯನಾಡಿನ ಎನ್ ಊರು ಗ್ರಾಮ ಮತ್ತು ಕೋಝಿಕ್ಕೋಡ್‌ನ ನದಿ ದಂಡೆಗಳು ಮತ್ತು ಜಲಮೂಲಗಳು ಸೇರಿದಂತೆ ಹಲವಾರು ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ .
ಇಡುಕ್ಕಿಯ ಕೆಲವು ಭಾಗಗಳು ಸೇರಿದಂತೆ ಪೀಡಿತ ಜಿಲ್ಲೆಗಳಲ್ಲಿ (ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ) ದೋಣಿ ವಿಹಾರ, ಕಯಾಕಿಂಗ್, ರಾಫ್ಟಿಂಗ್, ಚಾರಣ ಮತ್ತು ರಾತ್ರಿ ಪ್ರಯಾಣವನ್ನು ನಿಷೇಧಿಸಲಾಗಿದೆ.
ರೆಡ್ ಅಲರ್ಟ್: ಕಣ್ಣೂರು, ಕಾಸರಗೋಡು ಆರೆಂಜ್ ಅಲರ್ಟ್: 9 ಜಿಲ್ಲೆಗಳು – ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್ ಹಳದಿ ಎಚ್ಚರಿಕೆ: ತಿರುವನಂತಪುರಂ, ಕೊಲ್ಲಂ, ಆಲಪ್ಪುಳ

Share Information
Continue Reading
Advertisement
Click to comment

Leave a Reply

Your email address will not be published. Required fields are marked *