DAKSHINA KANNADA
ಬರ್ಕಿದ್ ಗೆ ಕುರ್ಬಾನಿ ನೆಪದಲ್ಲಿ ಅಕ್ರಮ ದನ ಸಾಗಾಟ, ಹತ್ಯೆ ವಿರುದ್ದ ನಿಗಾ ವಹಿಸಲು ಶಾಸಕ ಡಾ. ಭರತ್ ಶೆಟ್ಟಿ ಆಗ್ರಹ..!

ಮಂಗಳೂರು : ಬಕ್ರಿದ್ ಹಬ್ಬದ ಸಂದರ್ಭ ಕುರ್ಬಾನಿ ನೆಪದಲ್ಲಿ ಅಕ್ರಮ ದನ ಸಾಗಾಟ, ಹತ್ಯೆ ವಿರುದ್ದ ನಿಗಾ ವಹಿಸಲು ಶಾಸಕ ಡಾ. ಭರತ್ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬಕ್ರಿದ್ ಬಂದರೆ ಗೋ ಸಾಕಾಣಿಕೆ ಮಾಡಿ ಜೀವನ ನಡೆಸುವವರು ಆತಂಕಗೊಳ್ಳುವ ಸ್ಥಿತಿಯಿದ್ದು, ಗೋ ಹತ್ಯೆ ನಿಷೇಧ ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು. ಅಕ್ರಮವಾಗಿ ಕದ್ದು ತಂದ ಗೋವು ಕಡಿಯುವುದು ಕಂಡು ಬಂದರೆ ಆಸ್ತಿ ಮಟ್ಟುಗೋಲು ಹಾಕಿಕೊಳ್ಳಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959, ಜತೆಗೆ ಬಿಜೆಪಿ ಸರಕಾರ ಮಾಡಿದ ಬಿಗಿ ಕಾನೂನು ಈಗಾಗಲೇ ಜಾರಿಯಲ್ಲಿದೆ. ಕುರ್ಬಾನಿ ನೆಪದಲ್ಲಿ ಅಕ್ರಮವಾಗಿ ದನ ಸಾಗಾಟ, ಹತ್ಯೆ ವಿರುದ್ಧಗಸ್ತು ಹೆಚ್ಚಿಸಬೇಕು. ನಾಕಾ ಬಂದಿ ನಡೆಸಬೇಕು. ಪೊಲೀಸ್ ಇಲಾಖೆ ಧ್ವನಿ ವರ್ಧಕ ದ ಮೂಲಕ ಎಚ್ಚರಿಕೆ ಸಂದೇಶ ರವಾನಿಸಬೇಕು. ಈ ಮೂಲಕ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ, ಹೈನುಗಾರರಿಗೆ ನಷ್ಟವಾಗದಂತೆ ಎಚ್ಚರವಹಿಸಬೇಕು. ಶಾಂತಿ ಸೌಹಾರ್ಧತೆ ಬಗ್ಗೆ ಮಾತನಾಡುವ ಈಗಿನ ಸರಕಾರ ಈ ಬಗ್ಗೆ ಸೂಕ್ತ ಕ್ರಮಗೊಳ್ಳುತ್ತದೆ ಎಂದು ಭಾವಿಸಿದ್ದೇನೆ ಎಂದು ಶಾಸಕರು ಹೇಳಿದ್ದಾರೆ.