Connect with us

BELTHANGADI

ಬೆಳ್ತಂಗಡಿ – ಅಂತು ಇಂತು ಮುಗಿದ MLA ಬಂಧನ ಹೈಡ್ರಾಮ -ವಿಚಾರಣೆಗೆ ಠಾಣೆಗೆ ಬರಲು ಹೇಳಿ ಹೊರಟ ಪೊಲೀಸ್ ಅಧಿಕಾರಿಗಳು

ಬೆಳ್ತಂಗಡಿ ಮೇ 22: ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಬೆಳ್ತಂಗಡಿ ಪಿಎಸ್‌ಐಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಕೇಸ್‌ ದಾಖಲಾಗಿದೆ. ಈ ಪ್ರಕರಣಗಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಠಾಣೆ ಆಗಮಿಸಬೇಕೆಂದು ಪೊಲೀಸರು ನೋಟಿಸ್ ಜಾರಿ ನೀಡಿದ್ದಾರೆ. ಇದರಿಂದ ಹರೀಶ್ ಪೂಂಜಾ ನಿವಾಸದಲ್ಲಿ ಬಳಿ ಹೈಡ್ರಾಮಾವೇ ನಡೆದಿದೆ.


ಇವತ್ತು ಬೆಳಗ್ಗೆಯೇ ಹರೀಶ್ ಪೂಂಜಾ ಬಂಧಿಸಲು ಪೊಲೀಸರು ಅವರ ಗರ್ಡಾಡಿಯ ಮನೆಗೆ ಬಂದಿದ್ದರು. ಹರೀಶ್ ಪೂಂಜಾ ಮಾತ್ರ ನಾನು ಬರುವುದಿಲ್ಲ ಎಂದು ಹೇಳಿದರು. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ ಕಾರಣ ಭಾರೀ ಸಂಖ್ಯೆಯಲ್ಲಿ ಪೊಲೀಸರು ಸಹ ಆಗಮಿಸಿದ್ದರು. ಇನ್ನೊಂದು ಕಡೆ ವಕೀಲರು ಸಹ ಮನೆಗೆ ಆಗಮಿಸಿದರು.


ಇನ್ನೊಂದೆಡೆ ಬಿಜೆಪಿ ನಾಯಕರು ಬೆಳ್ತಂಗಡಿಗೆ ಆಗಮಿಸಿದ ಪೊಲೀಸರು ಅರೆಸ್ಟ್ ಮಾಡಿದರೆ ಮುಂದೆ ಆಗುವ ಅನಾಹುತಕ್ಕ ಅವರೇ ಕಾರಣ ಎಂದು ಎಚ್ಚರಿಕೆ ನೀಡಿದರು. ಶಾಸಕ ಹರೀಶ್ ಪೂಂದಾ ಅವರ ಮನೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು, ಪ್ರತಿಭಟನೆ ಜೋರಾಗುತ್ತಿದ್ದಂತೆ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಹರೀಶ್‌ ಪೂಂಜಾ ಅವರಿಗೆ ನೋಟಿಸ್‌ ಜಾರಿ ಮಾಡಿ ತೆರಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *