Connect with us

LATEST NEWS

ನಾಡದೋಣಿ ಪಲ್ಟಿಯಾಗಿ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಹುಡುಕಾಟ

ಮಂಗಳೂರು ಜೂನ್ 01: ಮೇ 30ರಂದು ಬೆಳಿಗ್ಗಿನ ಫಲ್ಗುಣಿ ನದಿಯ ಅಳಿವೆಬಾಗಿಲು ನದಿಯ ದಡದಲ್ಲಿ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿರುವ ತೋಟ ಬೆಂಗರೆ ನಿವಾಸಿಗಳಾದ ಯಶವಂತ ಕರ್ಕೇರಾ ಮತ್ತು ಕಮಲಾಕ್ಷ ಸಾಲಿಯಾನ್ ಅವರಿಗಾಗಿ ಹುಡುಕಾಟ ಮುಂದುವರಿದಿದೆ. ಕರಾವಳಿ ಕಾವಲು ಪಡೆಯ ಸಿಬ್ಬಂದಿ ಶುಕ್ರವಾರ ಮತ್ತು ಶನಿವಾರವಿಡೀ ಹುಡುಕಾಡಿದ್ದಾರೆ.


ಭಾನುವಾರ ಮಳೆ ಕಡಿಮೆಯಾದ ಕಾರಣ ಸ್ಥಳೀಯ ಮೀನುಗಾರರು ಕೂಡ ದೋಣಿಗಳಲ್ಲಿ ತೆರಳಿ ಹುಡುಕಾಡಿದ್ದು ಮೀನುಗಾರಿಕೆಗೆ ಬಳಸುವ ಬೋಟ್‌ಗಳನ್ನು ಇಳಿಸಲಾಗಿದೆ. ಕಲ್ಲು-ಬಂಡೆಗಳ ಎಡೆಯಲ್ಲಿ ಸಿಲುಕಿದ್ದರೆ ಪತ್ತೆ ಮಾಡುವುದಕ್ಕಾಗಿ ಡೋನ್ ಬಳಸಲಾಗಿದೆ. ಸಮುದ್ರದಲ್ಲಿ ನಿಗಾ ವಹಿಸುವಂತೆ ಸರಕು ಸಾಗಣೆ ಹಡಗುಗಳ ಸಿಬ್ಬಂದಿಗೆ ಸೂಚಿಸುವಂತೆ ಬಂದರು ಅಧಿಕಾರಿಗಳನ್ನು ಕೋರಲಾಗಿದೆ ಎಂದು ಟ್ರೋಲ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್‌ ಬೆಂಗ್ರೆ ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *