DAKSHINA KANNADA
ಬಿಜೆಪಿಯವರಿಗೆ ಹಿಂದೂ ಸತ್ತರೆ ಮಾತ್ರ ನೋವಾಗುತ್ತೆ ಬೇರೆಯವರು ಸತ್ತರೆ ನೋವಾಗಲ್ಲ ಅವರಿಗೆ ಮನುಷ್ಯತ್ವವೇ ಇಲ್ಲ – ದಿನೇಶ್ ಗುಂಡೂರಾವ್

ಪುತ್ತೂರು ಜೂನ್ 18: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಬಿಜೆಪಿಯವರಿಗೆ ಯಾರಿಗೆ ಕೊಡಲು ಮನಸ್ಸಿದೆ ಅವರಿಗೆ ಕೊಡಲಿ ಈ ವಿಚಾರದಲ್ಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ NIA ಗೆ ಹಸ್ತಾಂತರ ಕುರಿತಂತೆ ಈ ವಿಚಾರದಲ್ಲಿ ಪರಿಶೀಲನೆ ಮಾಡುತ್ತೇವೆ ಎಂದು ಗೃಹಸಚಿವರು ಈಗಾಗಲೇ ಹೇಳಿದ್ದಾರೆ. NIA ಬರೋದಾದ್ರೆ ಬರಲಿ, ಜೆಪಿಯವರು NIA ಬೇಕು ಅಂತಿದ್ದಾರೆ. ಆದರೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಮ್ಮ ಪೋಲೀಸರು ಸೂಕ್ತ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದವರನ್ನು ಅರೆಸ್ಟ್ ಮಾಡಿದ್ದಾರೆ. ಯಾರೆಲ್ಲಾ ಈ ಘಟನೆಯ ಹಿಂದಿದ್ದಾರೆ ಅನ್ನೋದನ್ನ ತನಿಖೆ ಮಾಡಿದ್ದಾರೆ.

ಇನ್ನು NIA ತಂಡ ಬಂದು ಕೂಡಾ ಇದನ್ನೇ ಮಾಡುತ್ತದೆ. ನಮಗೆ ಯಾರು ತಪ್ಪು ಮಾಡಿದ್ದಾರೆ, ಯಾರು ಭಾಗಿಯಾಗಿದ್ದಾರೆ ಅವರು ಸಿಕ್ಕಿಹಾಕಿಕೊಳ್ಳಬೇಕು ಎಂದರು. ಆದರೆ ಬಿಜೆಪಿಯವರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಹಿಂದೂ ಸತ್ತರೆ ಮಾತ್ರ ನೋವಾಗುತ್ತದೆ, ಬೇರೆಯವರು ಸತ್ತರೆ ನೋವಾಗೋಲ್ಲಾ, ಅವರಿಗೆ ಮನುಷತ್ವವೇ ಇಲ್ಲ ಹೀಗಾಗಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ಆದರೆ ನಾವು ಎಲ್ಲರನ್ನೂ ಒಂದೇ ತರ ನೋಡುತ್ತೇವೆ, ಅಬ್ದುಲ್ ರಹಮಾನ್ ಹತ್ಯೆಯನ್ನೂ NIA ತನಿಖೆಗೆ ಕೊಡಲಿ. ನಮ್ಮ ಪೋಲೀಸರು ರಹಿಮಾನ್ ಹತ್ಯೆ ಪ್ರಕರಣದಲ್ಲೂ ಉತ್ತಮ ತನಿಖೆ ನಡೆಸಿದ್ದಾರೆ. ರಹಮಾನ್ ಕೊಲೆಯ ಹಿಂದೆ ಇರುವವರ ವಿಚಾರವೂ ನಮಗೆ ಗೊತ್ತಾಗಿದೆ. ಬೇಕಾದರೆ ಈ ಹತ್ಯೆಯನ್ನೂ NIA ಗೆ ಕೊಡಲಿ ನಮ್ಮದೇನೂ ಅಭ್ಯಂತರವಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.